ಮಡಿಕೇರಿ: ಕಾಫಿ ತೋಟಕ್ಕೆ ನುಗ್ಗಿದ ಕಾಡಾನೆಗಳು | ಅಪಾರ ಹಾನಿ

Prasthutha|

ಮಡಿಕೇರಿ: ಗ್ರಾ.ಪಂ ಸದಸ್ಯ ಮನುಮಹೇಶ್ ಅವರ ಕಾಫಿ ತೋಟಕ್ಕೆ ನುಗ್ಗಿದ ಕಾಡಾನೆಗಳು ಸಾಕಷ್ಟು ಹಾನಿ ಮಾಡಿದೆ. ತೋಟದ ನೀಲಗಿರಿ ಮರಗಳನ್ನು ನೆಲಗುರುಳಿಸಿದೆ. ಆನೆಗಳ ದಾಳಿಯನ್ನು ತಡೆಯಲು ಕಾವೇರಿ ನದಿ ಬಳಿ ಅಳವಡಿಸಿದ್ದ ರೈಲ್ವೆ ಕಂಬಿಯ ಬೇಲಿಯನ್ನು ಕೂಡ ಕಾಡಾನೆಗಳು ಜಖಂಗೊಳಿಸಿವೆ.

- Advertisement -

ತೋಟದಲ್ಲಾಗಿರುವ ಹಾನಿಗೆ ಅರಣ್ಯ ಇಲಾಖೆ ಪರಿಹಾರ ಈ ಕೂಡಲೇ ನೀಡಬೇಕೆಂದು ಸ್ಥಳೀಯರಾದ ಮನುಮಹೇಶ್ ಒತ್ತಾಯಿಸಿದ್ದಾರೆ. ಅಲ್ಲದೇ ಆನೆಗಳನ್ನು ದಾಳಿಯನ್ನು ತಡುವೆಯಲ್ಲಿ ರೈಲ್ವೇ ಕಂಬಿಗಳು ವಿಫಲವಾಗಿದ್ದು ಸೋಲಾರ್ ಬೇಲಿಯನ್ನು ನಿರ್ಮಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಾಡಾನೆಗಳ ಹಾವಳಿಗೆ ಹೈರಾಣಾಗಿರುವ ಬೆಳೆಗಾರರು ಸೂಕ್ತ ವ್ಯವಸ್ಥೆ ಕಲ್ಪಿಸಲು ಅರಣ್ಯ ಇಲಾಖೆಯ ಮೊರೆ ಹೋಗಿದ್ದಾರೆ.



Join Whatsapp