ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಿದ ಸಿಎಂ| ಯಾರಿಗೆ ಯಾವ ಜಿಲ್ಲಾ ಉಸ್ತುವಾರಿ? ಇಲ್ಲಿದೆ ಮಾಹಿತಿ

Prasthutha|

ಬೆಂಗಳೂರು: ರಾಜ್ಯದ ನೂತನ ಸಚಿವ ಸಂಪುಟ ರಚನೆಯಾಗಿದ್ದು, ಸಚಿವರಿಗೆ ಜಿಲ್ಲಾ ಉಸ್ತುವಾರಿಯ ಜವಾಬ್ದಾರಿಯನ್ನು ವಹಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿನ ನೆರೆ, ಪ್ರವಾಹ, ಕೊರೋನಾ 3ನೇ ಅಲೆಯ ನಿಯಂತ್ರಣ ಜವಾಬ್ದಾರಿಯನ್ನು ಮುಖ್ಯಮಂತ್ರಿ ಬೊಮ್ಮಾಯಿ ನೀಡಿದ್ದಾರೆ.

- Advertisement -

ಈ ಕುರಿತಂತೆ ಪಟ್ಟಿಯನ್ನು ಬಿಡುಗಡೆ ಮಾಡಿರುವಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರಾಜ್ಯದಲ್ಲಿ ಕೋವಿಡ್-19 ನಿರ್ವಹಣೆ ಹಾಗೂ ನೆರೆ ಹಾವಳಿ ಪರಿಹಾರ ಕೆಲಸಗಳನ್ನು ತ್ವರಿತವಾಗಿ ಪರಿಶೀಲನೆ ಮಾಡಲು, ಅವರ ಹೆಸರಿನ ಮುಂದೆ ಸೂಚಿಸಿರುವ ಜಿಲ್ಲೆಗಳಿಗೆ, ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಈ ಕೆಳಗಿನಂತಿದೆ…

  1. ಗೋವಿಂದ ಕಾರಜೋಳ – ಬೆಳಗಾವಿ
  2. ಕೆ.ಎಸ್.ಈಶ್ವರಪ್ಪ – ಶಿವಮೊಗ್ಗ
  3. ಆರ್.ಅಶೋಕ್ – ಬೆಂಗಳೂರು ನಗರ
  4. ಬಿ.ಶ್ರೀರಾಮುಲು – ಚಿತ್ರದುರ್ಗ
  5. ವಿ.ಸೋಮಣ್ಣ – ರಾಯಚೂರು
  6. ಉಮೇಶ್ ಕತ್ತಿ – ಬಾಗಲಕೋಟೆ
  7. ಎಸ್ ಅಂಗಾರ – ದಕ್ಷಿಣ ಕನ್ನಡ
  8. ಜೆಸಿ ಮಾಧುಸ್ವಾಮಿ – ತುಮಕೂರು
  9. ಅರಗ ಜ್ಞಾನೇಂದ್ರ – ಚಿಕ್ಕಮಗಳೂರು
  10. ಡಾ.ಸಿಎನ್.ಅಶ್ವತ್ಥನಾರಾಯಣ – ರಾಮನಗರ
  11. ಸಿಸಿ ಪಾಟೀಲ್ – ಗದಗ
  12. ಆನಂದ್ ಸಿಂಗ್ – ವಿಜಯನಗರ ಮತ್ತು ಬಳ್ಳಾರಿ
  13. ಕೋಟಾ ಶ್ರೀನಿವಾಸ ಪೂಜಾರಿ – ಕೊಡಗು
  14. ಪ್ರಭು ಚೌಹಾಣ್ – ಬೀದರ್
  15. ಮರುಗೇಶ್ ನಿರಾಣಿ – ಕಲಬುರ್ಗಿ
  16. ಶಿವರಾಂ ಹೆಬ್ಬಾರ್ – ಉತ್ತರ ಕನ್ನಡ
  17. ಎಸ್.ಟಿ.ಸೋಮಶೇಖರ್ – ಮೈಸೂರು ಮತ್ತು ಚಾಮರಾಜನಗರ
  18. ಬಿ.ಸಿ ಪಾಟೀಲ್ – ಹಾವೇರಿ
  19. ಬೈರತಿ ಬಸವರಾಜು – ದಾವಣಗೆರೆ
  20. ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ
  21. ಕೆ.ಗೋಪಾಲಯ್ಯ – ಹಾಸನ
  22. ಶಶಿಕಲಾ ಜೊಲ್ಲೆ – ವಿಜಯಪುರ
  23. MTB ನಾಗರಾಜು – ಬೆಂಗಳೂರು ಗ್ರಾಮಾಂತರ
  24. ಕೆಸಿ ನಾರಾಯಣ್ ಗೌಡ – ಮಂಡ್ಯ
  25. ಬಿಸಿ ನಾಗೇಶ್ – ಯಾದಗಿರಿ
  26. ಸುನೀಲ್ ಕುಮಾರ್ – ಉಡುಪಿ
  27. ಹಾಲಪ್ಪ ಆಚಾರ್ – ಕೊಪ್ಪಳ
  28. ಶಂಕರ್ ಪಾಟೀಲ್ ಮುನೇನಕೊಪ್ಪ – ಧಾರವಾಡ
  29. ವಿ.ಮುನಿರತ್ನ – ಕೋಲಾರ
Join Whatsapp