ರಾಜ್ಯದ ಚಿಂತೆ ಇಲ್ಲದ ಮುಖ್ಯಮಂತ್ರಿಗೆ ಸಂತೆಯಲ್ಲೂ ನಿದ್ದೆ: ಕಾಂಗ್ರೆಸ್ ಟೀಕೆ

Prasthutha|

ಬೆಂಗಳೂರು: ಜನಸಂಕಲ್ಪ ಯಾತ್ರೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನಿದ್ದೆ ಮಾಡುವ ವೀಡಿಯೋ ಒಂದನ್ನು ಕಾಂಗ್ರೆಸ್ ಟ್ವೀಟ್ ಮಾಡಿದ್ದು, ರಾಜ್ಯದ ಚಿಂತೆ ಇಲ್ಲದ ಮುಖ್ಯಮಂತ್ರಿಗೆ ಸಂತೆಯಲ್ಲೂ ನಿದ್ದೆ ಎಂದು ಬರೆದುಕೊಂಡಿದೆ.

- Advertisement -


ದೇಶದಲ್ಲಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಮಾಡುತ್ತಿರುವ ಹೊತ್ತಿಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜನಸಂಕಲ್ಪ ಯಾತ್ರೆ ಆರಂಭಿಸಿದೆ. ಈ ಬಗ್ಗೆ ಟ್ವೀಟ್ ಮಾಡಿದ ಕರ್ನಾಟಕ ಕಾಂಗ್ರೆಸ್ ರಾಜ್ಯದ ಚಿಂತೆ ಇಲ್ಲದ ಮುಖ್ಯಮಂತ್ರಿಗೆ ಸಂತೆಯಲ್ಲೂ ನಿದ್ದೆ! ಮುಖ್ಯಮಂತ್ರಿಗಳು ನಿದ್ದೆ ಮಾಡುವ ಸಮಯವನ್ನು “ಜನಸಂಕಲ್ಪ” ಎಂದು ಕರೆದುಕೊಳ್ಳುತ್ತಿದೆ ಎಂದು ಟೀಕೆ ಮಾಡಿದೆ.

- Advertisement -


ಬಿಜೆಪಿ ಸರ್ಕಾರದ ಬಳಿ ಹೇಳಲು ಸಾಧನೆಗಳು ಇಲ್ಲದಾಗ ನಿದ್ದೆ ಬರುವುದು ಸಹಜ ಅಲ್ಲವೇ #ಪೇಸಿಎಂ ಅವರೇ? ಎಂದು ಪ್ರಶ್ನೆ ಮಾಡಿದೆ.

Join Whatsapp