ಮಂಗಳೂರಿಗರ ಸೊಕ್ಕು ಮುರಿಯಲು ಕರಾವಳಿಗೆ ಪ್ರವಾಸ ನಿಲ್ಲಿಸಬೇಕು; ಕ್ಲಬ್ ಹೌಸ್ ಆಡಿಯೋ ವೈರಲ್

Prasthutha|

ಕರಾವಳಿಗೆ ಪ್ರವಾಸ ಹೋಗುವುದನ್ನು ನಿಲ್ಲಿಸುವ ತನಕ ಮಂಗಳೂರಿನ ಜನರ ಸೊಕ್ಕು ಮುರಿಯೋದಿಲ್ಲ ಎಂಬ ಕ್ಲಬ್ ಹೌಸ್ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -


ಕರುನಾಡು ವರ್ಸಸ್ ತುಳುನಾಡು ಕ್ಲಬ್ ಹೌಸ್‌ನಲ್ಲಿ ನಡೆದಿರುವ ಚರ್ಚೆಯಲ್ಲಿ ಕರಾವಳಿಗೆ ಟ್ರಿಪ್ ಹೋಗುವುದನ್ನು ನಿಲ್ಲಿಸಬೇಕು. ನಮ್ಮಲ್ಲಿ ದೇವಸ್ಥಾನಗಳಿಲ್ವ , ಮನೆ ದೇವರು ಇಲ್ವ ? ಇದನ್ನು ಬಿಟ್ಟು ಧರ್ಮಸ್ಥಳ , ಸುಬ್ರಹ್ಮಣ್ಯಕ್ಕೆ ಹೋಗುತ್ತಿದ್ದೇವೆ. ಅದನ್ನು ನಾವು ಕಡಿಮೆ ಮಾಡಬೇಕು ‘ ಎಂದು ಸದಸ್ಯರು ಹೇಳಿರುವುದು ಆಡಿಯೋದಲ್ಲಿದೆ.


‘ ಕನ್ನಡ ವಾಹಿನಿಗಳಲ್ಲಿ ಕರಾವಳಿಯ ಕೆಲವರು ಮೆರಿತಾ ಇದ್ದಾರೆ. ಅವರನ್ನು ಪ್ರೊಮೋಟ್ ಮಾಡುವುದನ್ನು ಕಡಿಮೆ ಮಾಡಬೇಕು ಎಂದಿರುವ ಕರುನಾಡು ಕ್ಲಬ್ ಹೌಸ್ ಗ್ರೂಪ್, ಅನುಶ್ರೀ ಎಂಟ್ರಿ ಆದ ಬಳಿಕ ತುಳುನಾಡಿನವರನ್ನು ಕ್ಲಬ್ ಹೌಸ್ ಗೆ ತುಂಬುತ್ತಿದ್ದಾರೆ ಎಂದಿದ್ದಾರೆ.

Join Whatsapp