ಬಳ್ಳಾರಿ : ಅಪ್ರಾಪ್ತ ಬಾಲಕಿಗೆ ತಾಳಿ ಕಟ್ಟಿದ ಪಾದ್ರಿ !

Prasthutha|

ಬಳ್ಳಾರಿ : ಪ್ರಾರ್ಥನೆ ಸಲ್ಲಿಸಲು ತಾಯಿಯೊಂದಿಗೆ ತೆರಳಿದ್ದ ೧೭ ವರ್ಷದ ಬಾಲಕಿಯನ್ನು ದೇವರು ಹೇಳಿದ್ದಾನೆಂದು ನಂಬಿಸಿ ಚರ್ಚ್ ಪಾದ್ರಿ ತಾಳಿ ಕಟ್ಟಿದ ಘಟನೆ ಬಳ್ಳಾರಿ ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.

- Advertisement -

ಕಳೆದ ತಿಂಗಳು ಮೇ ೧೪ ರಂದು ತನ್ನ ತಾಯಿಯೊಂದಿಗೆ ಪ್ರಾರ್ಥನೆ ಸಲ್ಲಿಸಲು ಎಂದಿನಂತೆ ಚರ್ಚ್ಗೆ ತೆರಳಿದ್ದ ವೇಳೆ ಚರ್ಚ್ ಪಾದ್ರಿ ದೇವರು ನಿನಗೆ ತಾಳಿ ಕಟ್ಟುವಂತೆ ಹೇಳಿದ್ದಾರೆಂದು ನಂಬಿಸಿ ದಿಢೀರನೆ ತಾಳಿ ಕಟ್ಟಿದ್ದಾನೆ. ಇದರಿಂದ ವಿಚಲಿತಗೊಂಡ ತಾಯಿ ಮತ್ತು ಮಗಳು ಮನೆಗೆ ತೆರಳಿ ಗ್ರಾಮದ ಮುಖಂಡರಿಗೆ ಮಾಹಿತಿ ತಿಳಿಸಿದ್ದು , ಸುದ್ದಿ ತಿಳಿಯುತ್ತಿದ್ದತೆಂಯೇ ಪಾದ್ರಿ ಪರಾರಿಯಾಗಿದ್ದಾನೆ. ಇದೀಗ ತೆಕ್ಕಲಕೋಟೆ ಪೋಲಿಸ್ ಠಾಣೆಗೆ ಯುವತಿಯ ತಾಯಿ ಪಾದ್ರಿಯ ವಿರುದ್ದ ದೂರು ಸಲ್ಲಿಸಿದ್ದಾರೆ.

ಯುವತಿಯ ತಾಯಿ ನೀಡಿದ ಹೇಳಿಕಯ ಪ್ರಕಾರ ಚರ್ಚ್ ಪಾದ್ರಿಯ ವಿರುದ್ದ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಪೋಲಿಸರು ಜಾಲ ಬೀಸಿದ್ದು , ತನಿಖೆ ಮುಂದುವರೆಸಿದ್ದಾರೆ.

Join Whatsapp