ಚಂದ್ರಶೇಖರ್ ಕೇಸರಿ ಶಾಲು ಹಾಕಿದ್ದ, ನನ್ನ ಮೇಲಿನ ಕೋಪಕ್ಕೆ ಮಗನನ್ನು ಕೊಲೆ ಮಾಡಿದ್ದಾರೆ: ಶಾಸಕ ರೇಣುಕಾಚಾರ್ಯ

Prasthutha|

ದಾವಣಗೆರೆ: ನಾನು ಯಾರ ಮೇಲೆ ಆರೋಪ ಮಾಡಲು ಹೋಗುವುದಿಲ್ಲ. ಚಂದ್ರಶೇಖರ್ ಮನೆಯಿಂದ ಹೋಗುವಾಗ ಕೇಸರಿ ಶಾಲು ಹಾಕಿದ್ದ, ನನ್ನ ಮೇಲಿನ ಕೋಪಕ್ಕೆ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

- Advertisement -

ಈ ಬಗ್ಗೆ ಹೊನ್ನಾಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಚಂದ್ರಶೇಖರ್ ನನ್ನ ಸಹೋದರನ ಪುತ್ರನಲ್ಲ, ನನ್ನ ಮಗ. ಇದು ಸಹಜ, ಅಪಘಾತ ಆದ ಸಾವಲ್ಲ. ಇದರ ಹಿಂದೆ ಕಾಣದ ಕೈವಾಡಗಳಿವೆ ಎಂದು ನೇರವಾಗಿ ಕೊಲೆಯಾಗಿರಬಹುದು ಎಂದರು.

ಇನ್ನು ಬೆಳೆಯುತ್ತಿದ್ದ ಮಗು ಅದು. ನಾಲೆಯೊಳಗಿನ ಕಾರಿನ ಸೀಟಿನ ಹಿಂದೆ ಹೋಗಲು ಹೇಗೆ ಸಾಧ್ಯ? ಯಾರೋ ಆತನನ್ನು ಮಲಗಿಸಿದ್ದಾರೆ. ಕೇಸರಿ ಶಾಲು ಧರಿಸಿದ್ದ. ಕಪ್ಪು ಶರ್ಟ್ ಹಾಗೂ ಪ್ಯಾಂಟ್ ಧರಿಸಿದ್ದ. ನನಗೆ ಬೆದರಿಕೆ ಕರೆಗಳು ಬಂದಾಗ ಹೆದರಲಿಲ್ಲ. ಸಹಜ ಸಾವೋ, ಅಸಹಜ ಸಾವೋ ಎಂಬುದನ್ನು ಮಾಧ್ಯಮದವರೇ ಗಮನಿಸಲಿ. ಸೀಟ್ ನಲ್ಲಿ ಇರಬೇಕಾದವನು ಹಿಂದೆ ಹೇಗೆ ಹೋಗಿದ್ದ. ಪೊಲೀಸರು ತನಿಖೆ ಮಾಡಿಸಲಿ. ಎಲ್ಲಾ ರೀತಿಯಲ್ಲಿ ಸಹಕಾರ ನೀಡುತ್ತೇವೆ ಎಂದು ತಿಳಿಸಿದ್ದಾರೆ.

Join Whatsapp