ಚಾಮರಾಜನಗರ ದುರಂತ ಸರಕಾರಿ ಪ್ರಾಯೋಜಿತ ಕೊಲೆ : ರಿಝ್ವಾನ್ ಅರ್ಷದ್

Prasthutha|

ಚಾಮರಾಜನಗರ: ಚಾಮರಾಜನಗರದಲ್ಲಿ ನಡೆದ ಆಕ್ಸಿಜನ್ ಕೊರತೆಯಿಂದಾಗಿ ನಡೆದ ಮಹಾದುರಂತವು ಸರಕಾರ ನಡೆಸಿರುವ ಸಾಮೂಹಿಕ ಕೊಲೆಯೆಂದು ಸಂಸದ ರಿಝ್ವಾನ್ ಅರ್ಷದ್ ಹೇಳಿದ್ದಾರೆ.

- Advertisement -

ಚಾಮರಾಜನಗರ ಘಟನೆಗೆ ಸಂಬಂಧಿಸಿ ‘ಪ್ರಸ್ತುತ ನ್ಯೂಸ್’ ಜೊತೆ ಮಾತನಾಡಿರುವ ರಿಝ್ವಾನ್ ಅರ್ಷದ್, ಕೋವಿಡ್ ಬಾಧಿತರಾಗಿ ಸಾಯುವುದು ಮತ್ತು ಆಕ್ಸಿಜನ್ ಇಲ್ಲದೆ ಸಾಯುವುದಕ್ಕೆ ಬಹಳಷ್ಟು ವ್ಯತ್ಯಾಸವಿದೆ. ಹಾಗಾಗಿ ಇದನ್ನು ಕೊಲೆ ಎಂದೇ ವ್ಯಾಖ್ಯಾನಿಸಬಹುದು. ಈ ಘಟನೆಗೆ ಸರಕಾರವೇ ನೇರ ಹೊಣೆ. ಸರಕಾರವೇ ಜನರನ್ನು ಸಾಯಿಸಿದೆ ಎಂದು ಹೇಳಿದ್ದಾರೆ.

ಈ ಘಟನೆಗೆ ಸರಕಾರದ ವೈಫಲ್ಯವೇ ಕಾರಣ. ಹಾಗಾಗಿ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

- Advertisement -

ಆರೋಗ್ಯ ಸಚಿವ ಡಾ.ಸುಧಾಕರ್ ಅವರ ‘ಇದು ಆಕ್ಸಿಜನ್ ಕೊರೆತೆಯಿಂದಾಗಿ ನಡೆದ ಘಟನೆಯಲ್ಲ’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ದೇವರು ಪ್ರತಿಯೊಂದನ್ನು ನೋಡುತ್ತಿದ್ದಾರೆ ಎಂಬುವುದನ್ನು ನಾನು ಜ್ಞಾಪಿಸುತ್ತೇನೆ. ಸುಳ್ಳು ಹೇಳುವುದಕ್ಕೂ ಒಂದು ಇತಿ ಮಿತಿ ಇರುತ್ತೆ ಈ ರೀತಿ ಸುಳ್ಳು ಹೇಳಬಾರದು. ಬಿಜೆಪಿ ಸರಕಾರ ದುಡ್ಡು ಹೊಡೆಯುವುದರಲ್ಲಿ ಕಾಲ ಕಳೆಯುತ್ತಿದೆ. ಜನರ ಪ್ರಾಣ ಉಳಿಸಲು ನಿಮ್ಮ ಕೈಯ್ಯಲ್ಲಿ ಶಕ್ತಿಯಿಲ್ಲ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಹೇಳಿದ್ದಾರೆ.

Join Whatsapp