ಕೊಲಿಜಿಯಂ ಅನುಮೋದಿಸಿದ ಹೆಸರುಗಳನ್ನು ತಡೆಹಿಡಿಯುವ ಕೇಂದ್ರದ ನಿರ್ಧಾರ ಸ್ವೀಕಾರಾರ್ಹವಲ್ಲ: ಕಾನೂನು ಕಾರ್ಯದರ್ಶಿಗೆ ಸುಪ್ರೀಂ ನೋಟಿಸ್

Prasthutha|

ನವದೆಹಲಿ: ನ್ಯಾಯಮೂರ್ತಿಗಳ ನೇಮಕಕ್ಕಾಗಿ ಕೊಲಿಜಿಯಂ ಅನುಮೋದಿಸಿದ ಹೆಸರುಗಳನ್ನು ತೆರವುಗೊಳಿಸುವಲ್ಲಿನ ವಿಳಂಬದ ಬಗ್ಗೆ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಕಾನೂನು ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದೆ.

- Advertisement -

ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಅಭಯ್ ಶ್ರೀನಿವಾಸ್ ಓಕಾ ಅವರನ್ನೊಳಗೊಂಡ ಪೀಠವು ಕೊಲಿಜಿಯಂ ಅನುಮೋದಿಸಿದ ಹೆಸರುಗಳನ್ನು ಕೇಂದ್ರವು 3 ರಿಂದ 4 ವಾರಗಳಲ್ಲಿ ತೆರವುಗೊಳಿಸಬೇಕೆಂದು ಆದೇಶಿಸಿದೆ.

ಸುಪ್ರೀಂ ಕೋರ್ಟ್ ಕೊಲಿಜಿಯಂ ಪುನರುಚ್ಚರಿಸಿದ 11 ಹೆಸರುಗಳನ್ನು ಕೇಂದ್ರ ಸರ್ಕಾರ ಅನುಮೋದಿಸದಿರುವುದನ್ನು ಪ್ರಶ್ನಿಸಿ 2021 ರಲ್ಲಿ ಬೆಂಗಳೂರಿನ ವಕೀಲರ ಸಂಘವು ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಿತ್ತು. ಕೇಂದ್ರದ ನಡವಳಿಕೆಯು ಪಿಎಲ್ಆರ್ ಪ್ರಾಜೆಕ್ಟ್ ಸ್ ಲಿಮಿಟೆಡ್ ವರ್ಸಸ್ ಮಹಾನದಿ ಕೋಲ್ಫೀಲ್ಡ್ ಸ್ ಪ್ರೈವೇಟ್ ಲಿಮಿಟೆಡ್ ನಲ್ಲಿನ ನಿರ್ದೇಶನಗಳ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಅಸೋಸಿಯೇಷನ್ ವಾದಿಸಿತ್ತು.



Join Whatsapp