ದಲಿತ ವಿದ್ಯಾರ್ಥಿನಿಯರನ್ನು ಬಲವಂತವಾಗಿ ವಿವಸ್ತ್ರಗೊಳಿಸಿದ ಪ್ರಕರಣ: ಇಬ್ಬರು ಶಿಕ್ಷಕರ ವಿರುದ್ಧ ಪ್ರಕರಣ ದಾಖಲು

Prasthutha|

ಮುಝಫ್ಫರ್ ನಗರ: ಉತ್ತರ ಪ್ರದೇಶದ ಹಾಪುರದ ಸರ್ಕಾರಿ ಶಾಲೆಯಲ್ಲಿ ಇಬ್ಬರು ದಲಿತ ಶಾಲಾ ಬಾಲಕಿಯರನ್ನು ಶಿಕ್ಷಕರು ವಿವಸ್ತ್ರಗೊಳಿಸಿ ಅವರ ಸಮವಸ್ತ್ರಗಳನ್ನು ಮೇಲ್ಜಾತಿಯ ಹುಡುಗಿಯರಿಗೆ ತರಗತಿಯ ಫೋಟೋಗಾಗಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ವಿಭಾಗಗಳ ಅಡಿಯಲ್ಲಿ ಶಿಕ್ಷಕರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.

- Advertisement -

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ (ಎನ್ಸಿಎಸ್ಸಿ) ಕ್ರಮ ಕೈಗೊಳ್ಳಲು  ಒತ್ತಾಯಿಸಿದ ನಂತರ ಯುಪಿ ರಾಜ್ಯ ಶಿಕ್ಷಣ ಇಲಾಖೆ ತನಿಖೆಗೆ ಆದೇಶಿಸಿತ್ತು.

ಜುಲೈ 11 ರಂದು, ನಾಲ್ಕನೇ ತರಗತಿಯ ಇಬ್ಬರು ದಲಿತ ಶಾಲಾ ಬಾಲಕಿಯರನ್ನು ಅವರ ಸಮವಸ್ತ್ರಗಳನ್ನು ತೆಗೆದು ಮೇಲ್ಜಾತಿಯ ಹುಡುಗಿಯರಿಗೆ ತರಗತಿಯ ಫೋಟೋಗಾಗಿ ನೀಡಲು ಒತ್ತಾಯಿಸಲಾಗಿತ್ತು. ಅವರು ಪ್ರತಿಭಟಿಸಿದಾಗ ಶಿಕ್ಷಕರು ಅವರನ್ನು ಹೊರಹಾಕುವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ಘಟನೆ ಬೆಳಕಿಗೆ ಬಂದ ನಂತರ ಪ್ರಾಥಮಿಕ ಶಿಕ್ಷಣ ಅಧಿಕಾರಿ ಅರ್ಚನಾ ಗುಪ್ತಾ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಿದ್ದು,  ಆದರೆ ಪೊಲೀಸರು ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.

Join Whatsapp