ಗೃಹ ಸಚಿವರ ಮುಂಗಾವಲು ವಾಹನಕ್ಕೆ ಕಾರು ಡಿಕ್ಕಿ; ಅಪಾಯದಿಂದ ಪಾರಾದ ಪ್ರಯಾಣಿಕರು

Prasthutha|

ತುಮಕೂರು:  ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರ ಮುಂಗಾವಲು ವಾಹನಕ್ಕೆ ಎದುರಿನಿಂದ ಬಂದ ಕಾರೊಂದು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.

- Advertisement -

ಇಂದು ತುಮಕೂರು ನಗರದಲ್ಲಿ ಸ್ವಾತಂತ್ರ್ಯ ಸಮಾರಂಭದಲ್ಲಿ ಭಾಗವಹಿಸಿ, ತಮ್ಮ ವಿಧಾನಸಭಾ ಕ್ಷೇತ್ರ ತೀರ್ಥಹಳ್ಳಿ ಗೆ ತೆರಳುವ ಮಾರ್ಗದಲ್ಲಿ, ಉಂಬಳೇಬೈಲ್ ಗ್ರಾಮದ ತಿರುವಿನಲ್ಲಿ,  ಘಟನೆ ಸಂಭವಿಸಿದೆ.

ಘಟನೆಯಲ್ಲಿ  ಪೊಲೀಸ್ ವಾಹನಕ್ಕೆ ಹಾನಿ ಸಂಭವಿಸಿದ್ದು,  ಕಾರಿನಲ್ಲಿದ್ದ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

- Advertisement -

ಘಟನೆಯ ನಂತರ, ಸಚಿವರು, ತಮ್ಮ ವಾಹನದಲ್ಲಿ, ಡಿಕ್ಕಿಯಾದ ವಾಹನದಲ್ಲಿದ್ದ ಪ್ರಯಾಣಿಕರನ್ನು ಹಾಗೂ ಸಿಬ್ಬಂದಿಯನ್ನು  ಸುರಕ್ಷಿತವಾಗಿ, ತಲುಪಿಸಿದ್ದಾರೆ.

Join Whatsapp