ಕಾರು-ಬಸ್​ ಅಪಘಾತ; 10 ಮಂದಿ ದಾರುಣ ಸಾವು

Prasthutha|

ಗಾಂಧಿನಗರ: ಕಾರು ಹಾಗೂ ಬಸ್​ ಡಿಕ್ಕಿಯಾಗಿ ಸಂಭವಿಸಿ 10 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಗುಜರಾತ್ ನ ನವಸಾರಿ ಜಿಲ್ಲೆಯ ವೆಸ್ಮಾ ಬಳಿಯ ಹೆದ್ದಾರಿ 48 ರಲ್ಲಿ ನಡೆದಿದೆ.

- Advertisement -

ಅತಿವೇಗವಾಗಿ ಬಂದ ಫಾರ್ಚುನರ್​ ಕಾರು ಡಿವೈಡರ್​ಗೆ ಗುದ್ದಿ ಹಾರಿಬಿದ್ದು ಬಸ್​ಗೆ ಅಪ್ಪಳಿಸಿದೆ. ಕಾರಿನಲ್ಲಿದ್ದ 9 ಜನರ ಪೈಕಿ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಪಘಾತದ ಬಳಿಕ ಬಸ್​ ಚಾಲಕನ ಮೇಲೆ ಹಲ್ಲೆ ನಡೆದಿದ್ದು, ಗಂಭೀರವಾಗಿ‌ ಗಾಯಗೊಂಡಿದ್ದ ಆತ ಆಸ್ಪತ್ರೆಯಲ್ಲಿ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾನೆ.

- Advertisement -

ಬಸ್ಸಿನಲ್ಲಿದ್ದ 30 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದು,  ಗಂಭೀರ ಗಾಯಗೊಂಡ 11 ಮಂದಿಯನ್ನು ನವಸಾರಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಕಾರಿನಲ್ಲಿದ್ದ ಓರ್ವನನ್ನು ಸೂರತ್​ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಕಾರಿನಲ್ಲಿದ್ದವರು ಗುಜರಾತ್‌ ನ ಆಂಗಲೇಶ್ವರ ಪ್ರದೇಶದ ನಿವಾಸಿಗಳಾಗಿದ್ದಾರೆ. ಅಪಘಾತದ ಬಳಿಕ ಬಸ್‌ ಹಾಗೂ ಕಾರನ್ನು ಕ್ರೇನ್‌ ಮೂಲಕ ತೆರೆವು ಮಾಡಿದ್ದೇವೆ. ಅಫಘಾತದ ರಭಸಕ್ಕೆ ಕಾರು ನುಜ್ಜುಗಾಗಿದ್ದರೆ ಬಸ್​ನ ಮುಂಭಾಗ ಪೂರ್ಣ ಜಖಂಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp