ಮೊಮ್ಮಗನಿಂದ ಕ್ಯಾನ್ಸರ್ ಪೀಡಿತ ಅಜ್ಜಿಯ ಕೊಲೆ: ಕಾರಣವೇನು ಗೊತ್ತಾ?!

Prasthutha|

ಕೊಲ್ಲಂ: ಕ್ಯಾನ್ಸರ್ ಪೀಡಿತ ಅಜ್ಜಿಯನ್ನು ಶುಶ್ರೂಷೆ ಮಾಡಿ ಬೇಸತ್ತ ಮೊಮ್ಮಗನೊಬ್ಬ ತಲೆಯನ್ನು ಮಂಚಕ್ಕೆ ಬಡಿದು ಕ್ರೂರವಾಗಿ ಕೊಲೆಗೈದ ಘಟನೆ ಜಿಲ್ಲೆಯ ಕಾಕನಾಡ್‌ನಲ್ಲಿ ನಡೆದಿದೆ.

- Advertisement -

ಕಾಕನಾಡ್ ನಿವಾಸಿ ವಯೋವೃದ್ಧೆ ಪೊನ್ನಮ್ಮ ಶುಕ್ರವಾರ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆದರೆ ಮೃತದೇಹದ ಅಂತ್ಯಸಂಸ್ಕಾರದ ವೇಳೆ ಇದು ಸ್ವಾಭಾವಿಕ ಸಾವಲ್ಲ, ಕೊಲೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದರು.

ಈ ನಿಟ್ಟಿನಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ನಡೆಸಿದ ಪೊಲೀಸರಿಗೆ ಇದು ಕೊಲೆ ಎಂದು ಸ್ಪಷ್ಟವಾಗಿದೆ. ಇಂದು ದೊರೆತ ಮರಣೋತ್ತರ ಪರೀಕ್ಷೆ ವರದಿ, ಮತ್ತಿತರ ವೈದ್ಯಕೀಯ ವರದಿಗಳಿಂದ ಇದು ಕೊಲೆ ಎಂದು ಸಾಬೀತಾಗಿತ್ತು. ತಲೆಗೆ ಉಂಟಾದ ಗಂಭೀರ ಗಾಯವೇ ಸಾವಿಗೆ ಕಾರಣ ಎಂದು ವರದಿ ತಿಳಿಸಿತ್ತು. ಅಲ್ಲದೇ ಮೊಮ್ಮಗ ಸುರೇಶ್ ಕುಮಾರ್ ವರ್ತನೆಯಲ್ಲಿ ಅನುಮಾನಗೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದಾಗ ಘಟನೆಯ ನೈಜಾಂಶ ಹೊರಬಂದಿದೆ.

- Advertisement -

ಶುಕ್ರವಾರ ಮಧ್ಯಾಹ್ನದ ವೇಳೆ ಊಟದ ಬಳಿಕ ಅಜ್ಜಿ ಮತ್ತು ಮೊಮ್ಮಗನ‌ ನಡುವೆ ವಾಗ್ವಾದ ನಡೆದಿತ್ತು. ಆ ಬಳಿಕ‌ ಅಜ್ಜಿಯ ಕುತ್ತಿಗೆ ಹಿಡಿದು ತಲೆಯನ್ನು ಮಂಚಕ್ಕೆ ಜೋರಾಗಿ ಬಡಿದು ಕೊಲೆ ಮಾಡಲಾಗಿದೆ. ಅಜ್ಜಿ ಕೆಲ ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಶುಶ್ರೂಷೆ ನಡೆಸಿ ಬೇಸತ್ತಿದ್ದು, ಅಜ್ಜಿ ಜೀವಂತ ಇದ್ದರೆ ಶುಶ್ರೂಷೆ ತಾನೇ ಮುಂದುವರಿಸಬೇಕಾಗುತ್ತೆ ಎಂದು ಕೊಲೆ ಮಾಡಿದ್ದೇನೆಂದು ಸುರೇಶ್ ಕುಮಾರ್ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ.



Join Whatsapp