ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಸಂದೀಪ್ ನಂಗಲ್ ಹತ್ಯೆ ಪ್ರಕರಣ: ಕೊಲೆ ಹಿಂದೆ ಕೆನಡಾ ವ್ಯಕ್ತಿಯ ಕೈವಾಡ

Prasthutha|

ಚಂಡೀಗಢ: ಪಂಜಾಬ್‌ನ ಜಲಂಧರ್‌ನಲ್ಲಿನ ಮಲಿಯನ್ ಖುರ್ದ್ ಎಂಬಲ್ಲಿ ಕಳೆದ ಸೋಮವಾರ ಸಂಜೆ ಕಬಡ್ಡಿ ಟೂರ್ನಮೆಂಟ್ ವೇಳೆಯೇ ಖ್ಯಾತ ಅಂತಾರಾಷ್ಟ್ರೀಯ ಕಬಡ್ಡಿಪಟು ಸಂದೀಪ್ ಸಿಂಗ್ ಸಿಂಗ್ ನಂಗಲ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಹಿಂದೆ ಕೆನಡಾ ಮೂಲದ ನಿವಾಸಿ ಸ್ನೋವರ್ ಧಿಲ್ಲೋನ್ ಕೈವಾಡ ಬಹಿರಂಗವಾಗಿದೆ.

- Advertisement -

ಕೊಲೆಗಾರ ವೃತ್ತಿಯ ಹಗೆತನ ಹಿನ್ನೆಲೆಯಲ್ಲಿ ಹತ್ಯೆ ನಡೆಸಿದ್ದು, ಒಂಟಾರಿಯೊ ರಾಷ್ಟ್ರೀಯ ಕಬಡ್ಡಿ ಫೆಡರೇಷನ್ ನಡೆಸುತ್ತಿರುವ ಸ್ನೋವರ್ ಧಿಲೋನ್ ಕೈವಾಡದಿಂದಲೇ ನಂಗಲ್ ಹತ್ಯೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಧಿಲೋನ್ ಸೇರಿದಂತೆ ಸುಮಾರು 12ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಧಿಲೋನ್ ನಡೆಸುತ್ತಿದ್ದ ಫೆಡರೇಷನ್ ಗೆ ಸಂದೀಪ್ ನಡೆಸುತ್ತಿದ್ದ ಮೇಜರ್ ಲೀಗ್ ಕುತ್ತು ತಂದಿತ್ತು ಎನ್ನಲಾಗಿದೆ, ಇದೇ ಕಾರಣದಿಂದ ಧಿಲೋನ್ ಈ ಕೊಲೆ ಮಾಡಿಸಿದ್ದಾಗಿ ವಿಚಾರಣೆ ವೇಳೆ ಆರೋಪಿ ಫತ್ತೇಹ್ ಸಿಂಗ್ ಬಾಯ್ಬಿಟ್ಟಿರುವುದಾಗಿ ಪಂಜಾಬ್ ಡಿಜಿಪಿ ವಿಕೆ ಭಾವ್ರಾ ಹೇಳಿದ್ದಾರೆ.

Join Whatsapp