ಉತ್ತರ ಪ್ರದೇಶ: ಸಾರಾಯಿ ಖರೀದಿಸಲು ಹಣ ನೀಡದ್ದಕ್ಕೆ ಸ್ವಂತ ಮಗನಿಂದಲೇ ತಾಯಿಯ ಹತ್ಯೆ

Prasthutha|

ಶಹಜಹಾನ್ಪುರ: ವಿಪರೀತ ಮದ್ಯ ಸೇವನೆ ಚಟ ಅಂಟಿಕೊಂಡಿಸಿದ್ದ ಯುವಕನೋರ್ವ ಮದ್ಯಪಾನ ಖರೀದಿಸಲು ಹಣ ನೀಡಿಲ್ಲ ಎಂಬ ಕಾರಣಕ್ಕಾಗಿ ತನ್ನ ಸ್ವಂತ ತಾಯಿಯನ್ನೇ ಹತ್ಯೆಗೈದ ಘಟನೆ ಮುಕ್ರಾಂಪುರ ಗ್ರಾಮದಲ್ಲಿ ನಡೆದಿದೆ.

- Advertisement -

ರೇವತಿ(70) ಹತ್ಯೆಗೀಡಾದ ಮಹಿಳೆಯಯಾಗಿದ್ದಾರೆ. ಕೊಲೆಗೈದ ಆರೋಪಿ, ರೇವತಿ ಪುತ್ರ ನರೇಶ್ (35)ನನ್ನು ರೋಜಾ ಠಾಣಾ ಪೊಲೀಸರು ಬಂಧಿಸಿದ್ದಾರೆ.  

ಮದ್ಯಪಾನ ಖರೀದಿಸಲು ಆರೋಪಿ ನರೇಶ್ ತನ್ನ ತಾಯಿಯ ಜೊತೆ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾನೆ. ಆದರೆ ತಾಯಿ ರೇವತಿ ಕೊಡಲು ಒಪ್ಪದಿದ್ದಾಗ, ಹರಿತವಾದ ಆಯುಧದಿಂದ ನರೇಶ್ ತನ್ನ ತಾಯಿಯ ತಲೆಗೆ ಹಲ್ಲೆ ನಡೆಸಿದ್ದಾನೆ. ಪರಿಣಾಮ, ಸ್ಥಳದಲ್ಲೇ ರೇವತಿ ಕೊನೆಯುಸಿರೆಳೆದಿದ್ದಾಗಿ ರೋಜಾ ಪೊಲೀಸ್ ಠಾಣೆಯ SHO ರಾಜ್ ಕುಮಾರ್ ಶರ್ಮಾ ತಿಳಿಸಿದ್ದಾರೆ.

Join Whatsapp