ಕೆನಡಾ: ಸಿಖ್ ಸಮುದಾಯದ ಮೇಲಿನ ಹಿಂಸಾಚಾರ; ಭಾರತೀಯ ಮೂಲದ ಯುವಕ ಮೃತ್ಯು

Prasthutha|


ಟೊರೊಂಟೊ: ಕೆನಡಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಭಾರತೀಯ ಮೂಲದ ಸಿಖ್ ಯುವಕನೋರ್ವ ಮೃತಪಟ್ಟಿದ್ದಾನೆ.

- Advertisement -


ಮೃತ ಯುವಕನನ್ನು ಡಿಸೆಂಬರ್ 3ರಂದು ಅಲ್ಬರ್ಟಾ ಪ್ರಾಂತ್ಯದಲ್ಲಿ ಗುಂಡಿನ ದಾಳಿಗೊಳಗಾದ 24 ವರ್ಷದ ಸನ್ರಾಜ್ ಸಿಂಗ್ ಎಂದು ಗುರುತಿಸಲಾಗಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.


ಡಿಸೆಂಬರ್ 3 ರಂದು ಒಂಟಾರಿಯೊ ಪ್ರಾಂತ್ಯದಲ್ಲಿ 21 ವರ್ಷದ ಸಿಖ್ ಮಹಿಳೆ ಪವನ್ ಪ್ರೀತ್ ಕೌರ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಇದರ ನಂತರ ನಡೆದ ಮತ್ತೊಂದು ದಾಳಿಗೆ ಸನ್ರಾಜ್ ಸಿಂಗ್ ತುತ್ತಾಗಿದ್ದಾರೆ. ಕೆನಡಾದಲ್ಲಿ ಸಿಖ್ ಸಮುದಾಯದ ವಿರುದ್ಧ ನಡೆಯುತ್ತಿರುವ ಹಿಂಸಾಚಾರ ಭೀತಿಯ ವಾತಾವರಣವನ್ನುಂಟುಮಾಡಿದೆ.

Join Whatsapp