ಆಗಸ್ಟ್ 16 ರವರೆಗೆ ಕೊಡಗು – ಕೇರಳ ಬಸ್ ಸಂಚಾರ ಸ್ಥಗಿತ

Prasthutha|

ಮಡಿಕೇರಿ: ಕೋವಿಡ್ ಸೋಂಕು ನಿಯಂತ್ರಣ ಕ್ರಮವಾಗಿ ಕೊಡಗು ಜಿಲ್ಲಾಡಳಿತವು ಕೊಡಗಿನಿಂದ ಕೇರಳಕ್ಕೆ ಸಂಚರಿಸುವ ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್ ಗಳ ಸಂಚಾರವನ್ನು ಆಗಸ್ಟ್ 16 ರವರೆಗೆ ಸ್ಥಗಿತಗೊಳಿಸಿ ಆದೇಶಿಸಿದೆ.

- Advertisement -

 ಅದೇ ರೀತಿ ಕೇರಳದಿಂದ ಕೊಡಗು ಜಿಲ್ಲೆಗೆ ಸಕಾ೯ರಿ, ಖಾಸಗಿ ಬಸ್ ಪ್ರವೇಶವನ್ನೂ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಕೊಡಗು – ಕೇರಳ ಗಡಿ ಚೆಕ್ ಪೋಸ್ಟ್ ಗಳಲ್ಲಿ ಮತ್ತಷ್ಟು ಹೆಚ್ಚಿನ ತಪಾಸಣೆಗೂ ಸೂಚಿಸಲಾಗಿದೆ.

Join Whatsapp