ಮಂಗಳೂರು | ಬಸ್ ಬೆಂಕಿಗಾಹುತಿ ಪ್ರಕರಣ: ಚಾಲಕ ಬಂಧನ

Prasthutha|

ಮಂಗಳೂರು:  ಏ .8 ರಂದು ನಗರದ ಹಂಪನಕಟ್ಟೆ ಬಳಿ ಖಾಸಗಿ ಬಸ್ ಬೈಕ್‌ ಗೆ ಡಿಕ್ಕಿಯಾಗಿ ಬೆಂಕಿಗಾಹುತಿಯಾದ ಪ್ರಕರಣಕ್ಕೆ ಸಂಬಂಧಿಸಿ ಬಸ್ ಚಾಲಕನನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.

- Advertisement -

ಸುರತ್ಕಲ್ ಜನತಾ ಕಾಲೊನಿ ನಿವಾಸಿ ಬಿಜು ಮೋನು (54) ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.

ಹಂಪನಕಟ್ಟೆ ಸಿಗ್ನಲ್ ಜಂಪ್ ಮಾಡಿದ ಬಸ್ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ಪ್ರಕರಣ ದಾಖಲಾಗಿತ್ತು.  ಈ ಹಿನ್ನೆಲೆಯಲ್ಲಿ ಬಿಜು ಮೋನು ವನ್ನು ನಗರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಪಡಿಸಿದ್ದು , ಏ .26ರ ತನಕ ನ್ಯಾಯಾಂಗ ಬಂಧನ ವಿಧಿಸಿದೆ.

Join Whatsapp