ಕಾಶ್ಮೀರಿ ಫೈಲ್ಸ್‌ ವೀಕ್ಷಿಸಿ ವಾಪಾಸ್ಸಾಗುತ್ತಿದ್ದ ಬಿಜೆಪಿ ಸಂಸದನ ಮೇಲೆ ಬಾಂಬ್ ದಾಳಿ

Prasthutha|

ಹೊಸದಿಲ್ಲಿ: ಬಂಗಾಳ ಬಿಜೆಪಿ ಸಂಸದ ಜಗನ್ನಾಥ್‌ ಸರ್ಕಾರ್‌ ವಾಹನದ ಮೇಲೆ ದುಷ್ಕರ್ಮಿಗಳು ಕಚ್ಚಾ ಬಾಂಬ್‌ ದಾಳಿ ನಡೆಸಿರುವ ಘಟನೆ ಇಲ್ಲಿನ  ಏಮ್ಸ್‌ ರಸ್ತೆ ಸಮೀಪದ ಹರೀಂಘಟ ಪೊಲೀಸ್‌ ಠಾಣೆ ಬಳಿ ಘಟನೆ ನಡೆದಿದೆ. ಕಾಶ್ಮೀರಿ ಫೈಲ್ಸ್‌ ಸಿನಿಮಾ ನೋಡಿ ವಾಪಸಾಗುತ್ತಿದ್ದ ವೇಳೆ ದಾಳಿ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

- Advertisement -

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ತೃಣಮೂಲ ಕಾಂಗ್ರೆಸ್‌ ಆಡಳಿತದಲ್ಲಿ ಒಬ್ಬ ಸಂಸದನಿಗೂ ಸುರಕ್ಷತೆ ಇಲ್ಲ. ಇಲ್ಲಿ ಗೂಂಡಾಗಳು ಸ್ವತಂತ್ರವಾಗಿದ್ದು, ಅವರಿಗೆ ಕಾನೂನಿನ ಭಯ ಇಲ್ಲ ಎಂದು ಕಿಡಿಕಾರಿದೆ.

ಕಾಶ್ಮೀರಿ ಪಂಡಿತರ ಹತ್ಯೆಯ ಬಗ್ಗೆ ಮರುತನಿಖೆಗೆ ಆಗ್ರಹಿಸಿ ‌ವಿನೀತ್‌ ಜಿಂದಾಲ್‌ ಅವರು ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದ್ದು, 1989-90ರಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದ ಹತ್ಯಾಕಾಂಡದ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಒಪ್ಪಿಸಿ, ಈವರೆಗೆ  ನಡೆದ ಎಲ್ಲಾ ಪ್ರಕರಣಗಳ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಸಬೇಕು ಎಂದು ಕೋರಿದ್ದಾರೆ.

Join Whatsapp