ಅನಿವಾಸಿ ಕನ್ನಡಿಗರ ಒಕ್ಕೂಟದ ವತಿಯಿಂದ UAE ರಾಷ್ಟ್ರೀಯ ದಿನಾಚರಣೆ ಪ್ರಯುಕ್ತ ರಕ್ತದಾನ ಶಿಬಿರ

Prasthutha|

 ಅಬುಧಾಬಿ: ಯುಎಇ ಯಲ್ಲಿ ರಾಷ್ಟ್ರೀಯ ದಿನಾಚರಣೆ‌ ಅಂಗವಾಗಿ ಅನಿವಾಸಿ ಕನ್ನಡಿಗರ ಒಕ್ಕೂಟ‌ ವತಿಯಿಂದ  ಅಬುಧಾಬಿ ಖಾಲಿದಿಯಾ ಬ್ಲಡ್ ಬ್ಯಾಂಕ್ ನಲ್ಲಿ ರಕ್ತ ದಾನ ಶಿಬಿರವು ಏರ್ಪಡಿಸಲಾಗಿತ್ತು. 

- Advertisement -

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜನಾಬ್ ಶೇರ್ ಶಾ ಮತ್ತು ಅವರ ಪತ್ನಿ ಡಾ. ನಾಝ್ ಭಾಗವಹಿಸಿ ರಕ್ತದಾನ ಮಾಡಿದ ಯುವಕರನ್ನು ಅಭಿನಂದಿಸಿ ಹುರಿದುಂಬಿಸಿದರು. 

  ಜನಾಬ್ ಶೇರ್ ಶಾ ಮಾತನಾಡಿ, ಇನ್ನಷ್ಟು ಇಂತಹ ಸಾಮಾಜಿಕ ಕಾರ್ಯಕ್ರಮ ನಡೆಸಲು ಕರೆ ನೀಡಿದರು. ಒಂದು ರಾಜ್ಯದ ಸಂಸ್ಕೃತಿ, ಅಭಿರುಚಿ ಅರಿಯಲು ಭಾಷೆಯ ಅಗತ್ಯತೆ ವಿವರಿಸಿ ಸಮಯ ಹೊಂದಿಸಿ ಅರಬಿ ಹಾಗೂ ಇನ್ನಿತರ ಭಾಷೆ ಕಲಿಯಬೇಕು ಎಂದು ಒತ್ತಿ ಹೇಳಿದರು.

- Advertisement -

ಸಭೆಯ ಅಧ್ಯಕ್ಷತೆ ಜನಾಬ್ ಇಕ್ಬಾಲ್ ಪಾಂಡೇಶ್ವರ ವಹಿಸಿದ್ದರು.

ಸಾಮಾಜಿಕ ಸೇವೆಯ ಮನಗಂಡು, ಅದರ ಗೌರವಾರ್ಥ ಜನಾಬ್ ಶೇರ್ ಶಾ, ಡಾ.ನಾಝ್ ಮತ್ತು ಡಾಕ್ಟರ್ ರಿತೇಶ್ ರವರಿಗೆ ” ನೆನೆಪಿನ ಕಾಣಿಕೆ ” ಕೊಟ್ಟು ಸನ್ಮಾನಿಸಲಾಯಿತು. 

ಜನಾಬ್ ಇಕ್ಬಾಲ್ ಪಾಂಡೇಶ್ವರ ಸ್ವಾಗತಿಸಿದರು. ಜನಾಬ್ ಯಹ್ಯಾ ಕೊಡ್ಲಿಪೇಟೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Join Whatsapp