SDPI ಸಜಿಪನಡು ಮತ್ತು ಯಾನೆಪೋಯ ಆಸ್ಪತ್ರೆ ಸಹಯೋಗದೊಂದಿಗೆ ರಕ್ತದಾನ ಶಿಬಿರ

Prasthutha|

‘ರಕ್ತ ಕೊಟ್ಟು ಬಾಂಧವ್ಯ ಕಟ್ಟು ಮಾಸಾಚರಣೆ’ ಅಂಗವಾಗಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಸಜಿಪನಡು ಮತ್ತು ಯಾನೆಪೋಯ ಆಸ್ಪತ್ರೆ ದೇರಳಕಟ್ಟೆ ಇದರ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಿತು.

- Advertisement -

ಶಿಬಿರದ ಉದ್ಘಾಟನೆಯನ್ನು ಬಹು: ಹಾಫೀಝ್ ಇಸ್ಮಾಯಿಲ್ ಹನೀಫಿ ಕಲ್ಲಡ್ಕ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ರಕ್ತ ದಾನ ಮಾಡಿ ರಕ್ತ ದಾನದ ಮಹತ್ವವನ್ನು ತಿಳಿಸಿದ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ  ಮತ್ತು ರಾಜ್ಯ ಚುನಾವಣಾ ಸಹ ಉಸ್ತುವಾರಿ ನವಾಝ್ ಉಳ್ಳಾಲ, ಕ್ಷೇತ್ರ ಅಧ್ಯಕ್ಷರಾದ ಇರ್ಷಾದ್ ಅಜ್ಜಿನಡ್ಕ, ಶಾಹಿದ್ ಕಲ್ಕಟ್ಟ,  ಬ್ಲಾಕ್ ಅಧ್ಯಕ್ಷರಾದ ನವಾಝ್ ಸಜಿಪ, ಗ್ರಾಮ ಸಮಿತಿಯ ಅಧ್ಯಕ್ಷರಾದ ರಶೀದ್ ಸಜಿಪ, ಎಸ್.ಎನ್ಇಕ್ಬಾಲ್, ಇಸ್ಮಾಯಿಲ್, ಮಂಗಳೂರು ವಿಧಾನ ಸಭಾ ಕ್ಷೇತ್ರ ಮಾಧ್ಯಮ ಉಸ್ತುವಾರಿ ರಿಝ್ವಾನ್ ಸಜಿಪ ಅತಿಥಿಗಳಾಗಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಬ್ಲಡ್ ಕೇರ್ ಸಜಿಪ ಇದರ ಅಡ್ಮಿನ್ ನವಾಝ್ ಸಜಿಪ ನಿರೂಪಿಸಿದರು

Join Whatsapp