ಪಕ್ಷದ ಜಿಲ್ಲಾ ಕಚೇರಿಯೊಳಗೆ ಹೊಡೆದಾಡಿಕೊಂಡ ಬಿಜೆಪಿ ಕಾರ್ಯಕರ್ತರು

Prasthutha|

ಕೊಲ್ಕತ್ತಾ: ಬಿಜೆಪಿ ಜಿಲ್ಲಾ ಉಪಾಧ್ಯಕ್ಷನನ್ನು ಕಾರ್ಯಕರ್ತನೊಬ್ಬ ಪಕ್ಷದ ಜಿಲ್ಲಾ ಕಚೇರಿಯೊಳಗೆ ಥಳಿಸಿದ ಘಟನೆ ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ನಡೆದಿದೆ.

- Advertisement -


ಜಿಲ್ಲಾ ಉಪಾಧ್ಯಕ್ಷ ಶಂಕರ ಗುಚ್ಚೈತ್ ಎಂಬಾತ ಧ್ವಜಗಳನ್ನು ಸಂಗ್ರಹಿಸಲು ಪಕ್ಷದ ಕಚೇರಿಗೆ ಆಗಮಿಸಿದ್ದ ವೇಳೆ ಘಟನೆ ನಡೆದಿದೆ.
ಪಕ್ಷದ ಜಿಲ್ಲಾ ಕಚೇರಿಗೆ ಬಂದ ಮಂಡಲ ಅಧ್ಯಕ್ಷ ಠಾಕೂರ್ ದಾಸ್ ಮಿಡ್ಡಾ, ಜಿಲ್ಲಾ ಉಪಾಧ್ಯಕ್ಷ ಶಂಕರ ಗುಚ್ಚೈತ್ ನೊಂದಿಗೆ ಹಿಂದಿನ ಖರ್ಚು ವೆಚ್ಚಗಳ ವರದಿಯ ಬಗ್ಗೆ ಕೇಳಿದ್ದ. ಈ ವೇಳೆ ವಾಗ್ವಾದ ನಡೆದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ.


ಪಕ್ಷದ ಇತರ ಕಾರ್ಯಕರ್ತರು ಮಧ್ಯಪ್ರವೇಶಿಸುವವರೆಗೂ ಮಿಡ್ಡಾ -ಶಂಕರ್ ಅವರನ್ನು ಥಳಿಸುತ್ತಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಟಿಎಂಸಿ ನಾಯಕ ಅಜಿತ್ ಮೈತಿ, ಇದು ಬಿಜೆಪಿಯ ಆಂತರಿಕ ಕಲಹವನ್ನು‌ ತೋರಿಸುತ್ತದೆ. ಇದು ಅವರ ಸಂಸ್ಕೃತಿ’ ಎಂದು ಟೀಕಿಸಿದ್ದಾರೆ.

Join Whatsapp