ಮಹಿಳಾ ಆಯೋಗದ ಅಧ್ಯಕ್ಷರ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತರು

Prasthutha|

ಅಗರ್ತಲ: ತ್ರಿಪುರಾ ಮಹಿಳಾ ಆಯೋಗದ ಅಧ್ಯಕ್ಷೆ ಬರ್ನಾಲಿ ಗೋಸ್ವಾಮಿ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ತ್ರಿಪುರಾ ರಾಜ್ಯದ ಧಮ್‌’ನಗರದಲ್ಲಿ ನಡೆದಿದೆ.

- Advertisement -

ದಾಳಿ ನಡೆಸಿದವರಲ್ಲಿ ಬಿಜೆಪಿಯ ಕೆಲವು ಕೌನ್ಸಿಲರ್‌’ಗಳೂ ಸೇರಿದ್ದಾರೆ ಎಂದು ವರದಿಯಾಗಿದೆ.

   “ಸುಮಾರು 200 ಮಂದಿ ಪುರುಷರು ಮತ್ತು ಮಹಿಳೆಯರು ತನ್ನ ಮೇಲೆ ಹಲ್ಲೆ ನಡೆಸಿದ್ದು, ದಾಳಿಯಲ್ಲಿ ನಾನು ಗಾಯಗೊಂಡಿದ್ದೇನೆ. ದಾಳಿಕೋರರು ನನ್ನ ಸೀರೆಯನ್ನು ಹರಿದು ಹಾಕಿದ್ದಾರೆ. ನಾನು ಹಲವು ಬಾರಿ ಕರೆ ಮಾಡಿದರೂ ಪೊಲೀಸರು ಸಹಾಯಕ್ಕೆ ಬರಲಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕರೂ ಆಗಿರುವ ಬರ್ನಾಲಿ ಅವರು ಆರೋಪಿಸಿದ್ದಾರೆ.

Join Whatsapp