ಸಿಕಂದರಬಾದ್, ನಿಝಾಮಾಬಾದ್ ಹೆಸರನ್ನು ಬದಲಾಯಿಸುತ್ತೇವೆ: ಬಿಜೆಪಿ ಶಾಸಕ ರಾಜಾ ಸಿಂಗ್

Prasthutha|

ಹೈದರಾಬಾದ್: ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೇರಿದರೆ ಹೈದರಾಬಾದ್ ಸೇರಿದಂತೆ ತೆಲಂಗಾಣದ ಕೆಲವು ಜಿಲ್ಲೆಗಳಿಗೆ ಮರುನಾಮಕರಣ ಮಾಡಲಾಗುವುದೆಂದು ಬಿಜೆಪಿ ಶಾಸಕ ರಾಜಾಸಿಂಗ್ ತಿಳಿಸಿದ್ದಾರೆ.

- Advertisement -

ಹೈದರಾಬಾದ್ ಅನ್ನು ಭಾಗ್ಯನಗರ ಎಂದು ಉಲ್ಲೇಖಿಸಿರುವ ಆರೆಸ್ಸೆಸ್ ಟ್ವೀಟ್ ಗೆ ಪ್ರತಿಕ್ರಿಯಿಸಿದ ರಾಜಾ ಸಿಂಗ್, ನಗರದ ಹೆಸರನ್ನು ಬದಲಾಯಿಸುವುದು ಆರೆಸ್ಸೆಸ್ ನಡೆಸುವ ಸಭೆಯ ಉದ್ದೇಶ ಎಂದು ಕೆಲವರು ತಪ್ಪಾಗಿ ಹೇಳಿಕೆ ನೀಡುತ್ತಿದ್ದಾರೆ. ಆದರೆ ಹೈದರಾಬಾದ್ ಹೆಸರನ್ನು ಭಾಗ್ಯನಗರ ಎಂದು ಬದಲಾಯಿಸಲು ಬಿಜೆಪಿ ಮುಂದಾಗಿದೆ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇನೆ ಎಂದು ರಾಜಾ ಸಿಂಗ್ ಹೇಳಿಕೆ ನೀಡಿದ್ದಾರೆ.

ಸಿಕಂದರಾಬಾದ್, ಕರೀಂನಗರ ಮತ್ತು ನಿಝಾಮಾಬಾದ್ ಅನ್ನು ಮರುನಾಮಕರಣ ಮಾಡಲಾಗುವುದು ಎಂದು ರಾಜಾ ಸಿಂಗ್ ತಿಳಿಸಿದರು. ನಿಝಾಮರ ಆಳ್ವಿಕೆಯಲ್ಲಿ ಬದಲಾದ ಹಿನ್ನೆಲೆಯಲ್ಲಿ ಈ ಎಲ್ಲಾ ಹೆಸರುಗಳನ್ನು ಮರುನಾಮಕರಣ ಮಾಡಲಾಗುತ್ತದೆ ತಿಳಿಸಿದರು.

Join Whatsapp