ಮುಸ್ಲಿಮ್ ಬಾಹುಳ್ಯದ ಮೇವಾಡದಲ್ಲಿ ಘೋಷಣೆ ಕೂಗಿ ದಾಂಧಲೆ ನಡೆಸಿದ ಸಂಘಪರಿವಾರ

Prasthutha|

ನವದೆಹಲಿ: ಕೋಮು ಪ್ರಚೋದನಕಾರಿ ಘೋಷಣೆ ಕೂಗಿ ದಾಂಧಲೆ ನಡೆಸಿದ ಘಟನೆ ಮುಸ್ಲಿಮ್ ಪ್ರಾಬಲ್ಯದ ಮೇವಾಡದಿಂದ ವರದಿಯಾಗಿದೆ.

- Advertisement -

ಬಜರಂಗದಳದ ಮುಖಂಡ ಜೀತ್ ವಶಿಷ್ತ್ ನೇತೃತ್ವದಲ್ಲಿ ಸುಮಾರು 500 ಮಿಕ್ಕಿದ ಕಾರಿನೊಂದಿಗೆ ಆಗಮಿಸಿದ ಕಾರ್ಯಕರ್ತರು ಮತ್ತು ಬೆಂಬಲಿಗರು ಪುಂಡಾಟಿಕೆ ಮೆರೆದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ದೂರಿದ್ದಾರೆ.

54,000 ಕ್ಕೂ ಹೆಚ್ಚಿನ ಅನುಯಾಯಿಗಳು ಮೇವಾಡದಲ್ಲಿ ರ‍್ಯಾಲಿ ನಡೆಸಿರುವ ವೀಡಿಯೋವೊಂದನ್ನು ತನ್ನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹರ್ಯಾಣದ ಮೇವಾಡ ಜಿಲ್ಲೆಯ ಸಿಂಗರ್ ಗ್ರಾಮವನ್ನು ಪ್ರವೇಶಿಸಿದ ಸಂಘಪರಿವಾರದ ಕಾರ್ಯಕರ್ತರು ಕೇಸರಿ ಧ್ವಜಗಳನ್ನು ಹಿಡಿದುಕೊಂಡು ಭಾರೀ ಗಾತ್ರದ ತಲವಾರಿನೊಂದಿಗೆ ನೃತ್ಯ ಮಾಡುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.

- Advertisement -

ಸಿಂಗರ್ ದೇವಸ್ಥಾನದ ವರೆಗೆ ನಡೆಸಲಾದ ಭಗವಾ ಯಾತ್ರೆಯ ವೀಡಿಯೋವನ್ನು ವಶಿಷ್ತ್ ಎಂಬಾತ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದನು.

Join Whatsapp