ಧಾರ್ಮಿಕ ಮಾರ್ಗಗಳ ಮೂಲಕ ದೇಶ ವಿಭಜಿಸಲು ಬಿಜೆಪಿ ಯತ್ನ: ಲಾಲು ಪ್ರಸಾದ್

Prasthutha|

- Advertisement -

ಪುರ್ನಿಯಾ (ಬಿಹಾರ): ‘ಬಿಜೆಪಿಯು ಜಾತಿ ಹಾಗೂ ಧಾರ್ಮಿಕ ಮಾರ್ಗಗಳ ಮೂಲಕ ದೇಶವನ್ನು ವಿಭಜಿಸಲು ಯತ್ನಿಸುತ್ತಿದೆ’ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೆಡಿಯು ಮತ್ತು ಆರ್‌ಜೆಡಿ ಮೈತ್ರಿಕೂಟದ ರ್ಯಾಲಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಆರ್‌ಎಸ್‌ಎಸ್ ದೇಶದ ಅಲ್ಪಸಂಖ್ಯಾತರು ಮತ್ತು ದುರ್ಬಲರ ವಿರುದ್ಧ ಇವೆ. ಈ ಕಾರಣ 2024ರ ಲೋಕಸಭಾ ಚುನಾವಣೆ ಹಾಗೂ 2025ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಕಿತ್ತೊಗೆಯಬೇಕು ಎಂದು ಹೇಳಿದರು.

- Advertisement -

Join Whatsapp