‘ಯಡಿಯೂರಪ್ಪ ನಾಪತ್ತೆಯಾಗಿದ್ದಾರೆ’ – ಮುಖ್ಯಮಂತ್ರಿ ವಿರುದ್ಧ ಸದನದಲ್ಲಿ ಬಿಜೆಪಿ ಶಾಸಕನಿಂದಲೇ ವಾಗ್ದಾಳಿ !

Prasthutha|

- Advertisement -

ಸ್ವಪಕ್ಷೀಯರ ವಿರುಧ್ದವೇ ಧ್ವನಿಯೆತ್ತುವಲ್ಲಿ ಸುದ್ದಿಯಾಗುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಂಚಮಸಾಲಿ 2ಎ ಮೀಸಲಾತಿಗೆ ಸಂಬಂಧಿಸಿದಂತೆ ಇಂದು ಮತ್ತೊಮ್ಮೆ ಸಿಎಂ ವಿರುಧ್ದವೇ ಗುಡುಗಿದ್ದಾರೆ. ಇಂದು ವಿಧಾನಸೌಧದಲ್ಲಿ ಮಾತನಾಡಿದ ಶಾಸಕ ಯತ್ನಾಳ್, “ನಮ್ಮ ಸಮಾಜದ ಹೆಸರಿನಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಆದರೆ ಇಂದು ಈ ಸಮಾಜದ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿ ನಾಪತ್ತೆಯಾಗಿದ್ದಾರೆ. ಆದರೆ ಸಿದ್ದರಾಮಯ್ಯನವರಿಗೆ ಈ ಸಮಾಜದ ಬಗ್ಗೆ ಪ್ರೀತಿ ಇದೆ” ಎಂದು ಸದನದಲ್ಲಿ ಹೇಳಿದ್ದಾರೆ.

ನಾಪತ್ತೆ ಹೇಳಿಕೆ , ಯತ್ನಾಳ್- ರೇಣುಕಾಚಾರ್ಯ ಜಟಾಪಟಿ !
ಇನ್ನು ಸಿಎಂ ನಾಪತ್ತೆಯಾಗಿದ್ದಾರೆ ಎಂದು ಹೇಳಿದ ಶಾಸಕ ಯತ್ನಾಳ್ ವಿರುಧ್ದ ವಿಧಾನಸೌಧದಲ್ಲಿಯೇ ಯತ್ನಾಳ್ ಹಾಗೂ ರೇಣುಕಾಚಾರ್ಯ ನಡುವೆ ಜಟಾಪಟಿ ನಡೆದಿದೆ. ಸಿಎಂ ಯಡಿಯೂರಪ್ಪ ನಾಪತ್ತೆಯಾಗಿಲ್ಲ , ಪಂಚಮಸಾಲಿ ಸಮುದಾಯಕ್ಕೆ ಅಪಾರವಾದ ಗೌರವವಿದೆ ಎನ್ನುತ್ತಾ ಯತ್ನಾಳ್ ಹೇಳಿಕೆಯ ವಿರುಧ್ದ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

Join Whatsapp