ಬಿಜೆಪಿ ಗಂಗಾ ನದಿ ಇದ್ದಂತೆ, ಪಕ್ಷ ಸೇರಿ ಪಾವನರಾಗಿ: ತ್ರಿಪುರಾ ಸಿಎಂ

Prasthutha|

ಕಾಕ್ರಾಬನ್(ತ್ರಿಪುರಾ): ಬಿಜೆಪಿ ಗಂಗಾ ನದಿ ಇದ್ದಂತೆ, ಪಕ್ಷ ಸೇರಿ ಪಾವನರಾಗಿ ಎಂದು ತ್ರಿಪುರಾ ಸಿಎಂ ಮಾಣಿಕ್ ಸಾಹ ಹೇಳಿದ್ದಾರೆ.

- Advertisement -

ದಕ್ಷಿಣ ತ್ರಿಪುರಾದ ಕಾಕ್ರಾಬನ್ ನಲ್ಲಿ ಭಾನುವಾರ ಬಿಜೆಪಿಯಿಂದ ಆಯೋಜಿಸಲಾಗಿದ್ದ ‘ಜನ್ ವಿಶ್ವಾಸ್ ರ್‍ಯಾಲಿ’ಯ ಭಾಗವಾಗಿ ನಡೆದ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, “ಬಿಜೆಪಿ ಪಕ್ಷವು ಗಂಗಾ ನದಿಯಂತೆ. ಗಂಗೆಯಲ್ಲಿ ಪವಿತ್ರ ಸ್ನಾನ ಒಮ್ಮೆ ಮಾಡಿದರೆ ನಿಮ್ಮ ಎಲ್ಲ ಪಾಪಗಳು ಪರಿಹಾರವಾಗುತ್ತದೆ. ಅದೇ ರೀತಿ ಎಡ ಪಕ್ಷಗಳ ನಾಯಕರು ಬಿಜೆಪಿಗೆ ಸೇರಿದರೆ ಪಾವನರಾಗಿರುತ್ತೀರಿ” ಎಂದು ಹೇಳಿದ್ದಾರೆ.


“ಸ್ಟಾಲಿನ್ ಮತ್ತು ಲೆನಿನ್ ಸಿದ್ಧಾಂತವಾದಿಗಳಾದ ಎಡ ಪಕ್ಷಗಳ ನಾಯಕರನ್ನು ನಮ್ಮ ಪಕ್ಷಕ್ಕೆ ಸೇರುವಂತೆ ಆಹ್ವಾನಿಸುತ್ತಿದ್ದೇನೆ. ಏಕೆಂದರೆ ನಮ್ಮ ಪಕ್ಷವು ಗಂಗಾ ನದಿಯಂತೆ. ಗಂಗೆಯಲ್ಲಿ ಪವಿತ್ರ ಸ್ನಾನ ಒಮ್ಮೆ ಮಾಡಿದರೆ ನಿಮ್ಮ ಎಲ್ಲ ಪಾಪಗಳು ಪರಿಹಾರವಾಗುತ್ತದೆ. ಅದೇ ರೀತಿ ನೀವು ಬಿಜೆಪಿಗೆ ಸೇರಿದರೆ ಪಾವನರಾಗಿರುತ್ತೀರಿ” ಎಂದು ಹೇಳಿದರು.

- Advertisement -

“ಬಿಜೆಪಿ ಎಂಬ ರೈಲಿನ ಬೋಗಿಗಳು ಇನ್ನೂ ಖಾಲಿ ಇವೆ. ಖಾಲಿ ಇರುವ ಬೋಗಿಗಳಲ್ಲಿ ಬಂದು ಕುಳಿತುಕೊಳ್ಳಿ. ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮೆಲ್ಲರನ್ನು ನಾವು ಇರಬೇಕಾದ ಗಮ್ಯಸ್ಥಾನಕ್ಕೆ ಕರೆದೊಯ್ಯುತ್ತಾರೆ” ಎಂದು ಹೇಳಿದರು

Join Whatsapp