ಮುಂಬೈ: ಹನುಮಾನ್ ಚಾಲಿಸ ಪಠಿಸುವ ದೇವಸ್ಥಾನಗಳಿಗೆ ಉಚಿತ ಧ್ವನಿವರ್ಧಕ ನೀಡಲು ಮುಂದಾದ ಬಿಜೆಪಿ ನಾಯಕ

Prasthutha|

ಮುಂಬೈ: ಹಿಂದೂಗಳ ಐಕ್ಯತೆಗಾಗಿ ಹನುಮಾನ್ ಚಾಲಿಸ ಪಠಿಸುವ ದೇವಸ್ಥಾನಗಳಿಗೆ ಉಚಿತ ಧ್ವನಿವರ್ಧಕಗಳನ್ನು ವ್ಯವಸ್ಥೆಗೊಳಿಸಲು ಮಹಾರಾಷ್ಟ್ರದ ಬಿಜೆಪಿ ಕಾರ್ಯಾಧ್ಯಕ್ಷ ಮೋಹಿತ್ ಕಾಂಬೋಜ್ ಮುಂದಾಗಿದ್ದಾರೆ ಮತ್ತು ಮಸೀದಿಗಳಲ್ಲಿರುವ ಅಕ್ರಮ ಧ್ವನಿವರ್ಧಕಗಳನ್ನು ತೆಗೆಯುವಂತೆ ಒತ್ತಾಯಿಸಿದ್ದಾರೆ.

- Advertisement -

ಈ ಕುರಿತು ಪ್ರತಿಕ್ರಿಯಿಸಿದ ಕಾಂಬೋಜ್, ಹನುಮಾನ್ ಚಾಲಿಸಕ್ಕಾಗಿ ಧ್ವನಿವರ್ಧಕಗಳನ್ನು ಉಚಿತವಾಗಿ ನೀಡುವುದಾಗಿ ತಿಳಿಸಿದ್ದಾರೆ.
ಇತ್ತೀಚಿಗೆ ಮಸೀದಿಗಳಲ್ಲಿ ಹೆಚ್ಚಿನ ಡೆಸಿಬಲ್ ಧ್ವನಿವರ್ಧಕಗಳನ್ನು ತೆಗೆಯುವಂತೆ ಎಂ.ಎನ್.ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಒತ್ತಾಯಿಸಿದ ಬೆನ್ನಲ್ಲೇ ಕಾಂಬೋಜ್ ನಿಂದ ಈ ಹೇಳಿಕೆ ಹೊರಬಿದ್ದಿದೆ.

ಮಸೀದಿಗಳಲ್ಲಿ ಅಳವಡಿಸಲಾಗಿರುವ ಅಕ್ರಮ ಧ್ವನಿವರ್ಧಕಗಳನ್ನು ತೆರೆವುಗೊಳಿಸಬೇಕೆಂಬ ಠಾಕ್ರೆ ಅವರ ಬೇಡಿಕೆಯನ್ನು ಕಾಂಬೋಜ್ ಬೆಂಬಲಿಸಿದ್ದಾರೆ.

- Advertisement -

ಈ ಮಧ್ಯೆ ಸಮುದಾಯಗಳ ನಡುವೆ ಬಿರುಕು ಮೂಡಿಸದಂತೆ ಮಹಾರಾಷ್ಟ್ರ ಸರ್ಕಾರ ಇತರೆ ರಾಜಕೀಯ ಪಕ್ಷಗಳನ್ನು ಆಗ್ರಹಿಸಿದೆ.

Join Whatsapp