ಲಿಂಗಾಯತ ಕಾರ್ಯಕರ್ತರ ಬಗ್ಗೆ ಬಿಜೆಪಿಗೆ ಗೌರವವಿಲ್ಲ: AAP ನಾಯಕ

Prasthutha|

ಬೆಳಗಾವಿ: ಲಿಂಗಾಯತರ ಬಗ್ಗೆ ಬಿಜೆಪಿಗೆ ಗೌರವವಿಲ್ಲ ಎಂದು ಇತ್ತೀಚೆಗಷ್ಟೇ ಪಕ್ಷ ತೊರೆದು ಎಎಪಿ ಸೇರಿರುವ ರಾಜ್ ಕುಮಾರ್ ತೋಪಣ್ಣವರ್ ಹೇಳಿದ್ದಾರೆ.

- Advertisement -

ಬಿಜೆಪಿಯಲ್ಲಿ ಲಿಂಗಾಯತ ಕಾರ್ಯಕರ್ತರಿಗೆ ಅಥವಾ ಮುಖಂಡರಿಗೆ ಗೌರವವಿಲ್ಲ. ಹೀಗಾಗಿ ತಾವು ಪಕ್ಷ ತ್ಯಜಿಸಿದ್ದೇನೆ ಎಂದು  ರಾಜ್ ಕುಮಾರ್ ತೋಪಣ್ಣವರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಮತ್ತು ಉನ್ನತ ಹುದ್ದೆಗಳಲ್ಲಿ ಸಮುದಾಯದ ಹಲವಾರು ಸಕ್ರಿಯ ಕಾರ್ಯಕರ್ತರು ತಾರತಮ್ಯಗಳನ್ನು ಅನುಭವಿಸಿದ್ದಾರೆಂದು ಹೇಳಿದರು.

- Advertisement -

ಇದೇ ವೇಳೆ ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ವಂಚಿತ ಮಾಜಿ ಕಾರ್ಪೊರೇಟರ್ ದೀಪಕ್ ಜಮಖಂಡಿ ಹಾಗೂ ಬೆಳಗಾವಿ ಅಧ್ಯಕ್ಷ ಸ್ಥಾನದಿಂದ ವಜಾಗೊಂಡ ಗೂಳಪ್ಪ ಹೊಸಮನಿ ಅವರಂತಹ ಲಿಂಗಾಯತ ಸಮಾಜದ ಉತ್ತಮ ನಾಯಕರನ್ನು ಬಿಜೆಪಿ ಕಡೆಗಣಿಸಿದ ರೀತಿಯನ್ನು ಅವರು ಪ್ರಸ್ತಾಪಿಸಿದರು.

Join Whatsapp