ದಲಿತರ ಮೇಲೆ ಲಾಠಿ ಬೀಸಿದ ಬಿಜೆಪಿ ಸರ್ಕಾರ ತನ್ನೊಳಗಿದ್ದ ದಲಿತರ ಮೇಲಿನ ದ್ವೇಷ, ಅಸಹನೆಯನ್ನು ಕಾರಿಕೊಂಡಿದೆ: ಕಾಂಗ್ರೆಸ್

Prasthutha|

ಬೆಂಗಳೂರು: ಒಳಮೀಸಲಾತಿ ಜಾರಿಗಾಗಿ ಆಗ್ರಹಿಸಿ ಪ್ರತಿಭಟಿಸುತ್ತಿದ್ದ ದಲಿತ ಹೋರಾಟಗಾರರ ಮೇಲೆ ಲಾಠಿ ಬೀಸಿದ ಬಿಜೆಪಿ  ಸರ್ಕಾರ ತನ್ನೊಳಗಿದ್ದ ದಲಿತರ ಮೇಲಿನ ದ್ವೇಷ, ಅಸಹನೆಯನ್ನು ಕಾರಿಕೊಂಡಿದೆ. ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುತ್ತೇವೆ ಎಂದಿದ್ದ ಸರ್ಕಾರವೇ ಇಂದು ಲಾಠಿಚಾರ್ಜ್ ನಡೆಸಿ ಜಾರಿಯನ್ನು ನಿರಾಕರಿಸುವ ಸಂದೇಶ ನೀಡಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

- Advertisement -

ನನಗೆ ನಾಲ್ಕು ಮಕ್ಕಳಾಗಿದ್ದರೆ ಅದು ನನ್ನ ತಪ್ಪಲ್ಲ, ಅದು ಕಾಂಗ್ರೆಸ್ ತಪ್ಪು ಎಂದು ಹೇಳಿದ್ದ ಬಿಜೆಪಿ ಸಂಸದ ರವಿ ಕಿಶನ್ ವಿರುದ್ಧ ಟೀಕಾಪ್ರಹಾರ ನಡೆಸಿರುವ ಕಾಂಗ್ರೆಸ್, ಎಲ್ಲದಕ್ಕೂ ಕಾಂಗ್ರೆಸ್ಸನ್ನೇ ಹೊಣೆ ಮಾಡುತ್ತಿದ್ದ ಬಿಜೆಪಿಗರು ಈಗ ತಮ್ಮ ಮನೆಯ ಖಾಸಗಿ ವಿಚಾರಗಳಿಗೂ ಕಾಂಗ್ರೆಸ್ಸನ್ನೇ ಹೊಣೆ ಮಾಡಿದ್ದಾರೆ. ಬಿಜೆಪಿಗರಿಗೆ ಮಕ್ಕಳು ಹುಟ್ಟುವುದಕ್ಕೂ ಕಾಂಗ್ರೆಸ್ಸೇ ಕಾರಣ, ಮಕ್ಕಳು ಹುಟ್ಟದಿರುವುದಕ್ಕೂ ಕಾಂಗ್ರೆಸ್ಸೇ ಕಾರಣ! ಮತಿಗೇಡಿ ಬಿಜೆಪಿಗರಿಂದ ಇನ್ನೂ ಯಾವ ಹೊಣೆಗಾರಿಕೆಯನ್ನು ಕಾಂಗ್ರೆಸ್ ಹೊರಬೇಕಿದೆಯೋ! ಎಂದು ಕುಹಕವಾಡಿದೆ.

Join Whatsapp