‘ಹಿಟ್ಲರ್ ಜರ್ಮನಿಯನ್ನು ನಾಶಪಡಿಸಿದಂತೆಯೇ ಬಿಜೆಪಿ ಭಾರತವನ್ನು ನಾಶಪಡಿಸುತ್ತಿದೆ”: ದಿಗ್ವಿಜಯ್ ಸಿಂಗ್

Prasthutha|

ಹೊಸದಿಲ್ಲಿ: ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಬಿಜೆಪಿಯನ್ನು ಹಿಟ್ಲರ್ ಗೆ ಹೋಲಿಸಿದ್ದಾರೆ.

- Advertisement -

ಈ ಕುರಿತು ಟ್ವೀಟ್ ಮಾಡಿದ ಅವರು, ಚುನಾವಣೆಗೆ ಹತ್ತಿರವಾಗುತ್ತಿದ್ದಂತೆಯೇ ಬಿಜೆಪಿ ನಾಯಕರು ‘ಹಿಂದುತ್ವ ಅಪಾಯದಲ್ಲಿದೆ’ ‘ಹಿಂದುತ್ವವನ್ನು ರಕ್ಷಿಸಲು ಎಲ್ಲರೂ ಬಿಜೆಪಿಗೆ ಮತ ಹಾಕಿ’ ಎಂಬಂತಹ ಹೇಳಿಕೆಗಳನ್ನು ನೀಡಲಿದ್ದಾರೆ. ಹಿಟ್ಲರ್ ನೀತಿಯನ್ನೇ ಬಿಜೆಪಿ ಅನುಸರಿಸುತ್ತಿದೆ. ಹಿಟ್ಲರ್ ಜರ್ಮನಿಯನ್ನು ನಾಶ ಮಾಡಿದಂತೆ ಬಿಜೆಪಿ ಭಾರತವನ್ನು ನಾಶ ಮಾಡುತ್ತಿದೆ’ ಎಂದು ಹೇಳಿದ್ದಾರೆ.

ಮಧ್ಯಪ್ರದೇಶದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಪೃಥ್ವಿಪುರ, ರಾಯಗಾಂವ್ ಮತ್ತು ಜೋಬಾತ್‌ನಲ್ಲಿ ಅಕ್ಟೋಬರ್ 30 ರಂದು ಉಪಚುನಾವಣೆ ನಡೆಯಲಿದೆ. ನವೆಂಬರ್ 2 ರಂದು ಫಲಿತಾಂಶ ಪ್ರಕಟವಾಗಲಿದೆ.

Join Whatsapp