ಟಿವಿ ಚರ್ಚೆಯಲ್ಲಿ ಮುಖಂಡನಿಗೆ ಚಪ್ಪಲಿ ಎಸೆತ | ಎಬಿಎನ್ ಆಂಧ್ರಜ್ಯೋತಿ ವಾಹಿನಿ ಬಹಿಷ್ಕರಿಸಿದ ಬಿಜೆಪಿ

Prasthutha|

ಹೈದರಾಬಾದ್ : ಇತ್ತೀಚೆಗೆ ನಡೆದ ಒಂದು ನೇರ ಪ್ರಸಾರ ಕಾರ್ಯಕ್ರಮದಲ್ಲಿ ಚರ್ಚೆಯಲ್ಲಿ ಭಾಗವಹಿಸಿದವರೊಬ್ಬರು ತಮ್ಮ ಪಕ್ಷದ ಮುಖಂಡನಿಗೆ ಚಪ್ಪಲಿ ಎಸೆದ ಹಿನ್ನೆಲೆಯಲ್ಲಿ, ಎಬಿಎನ್ ಆಂಧ್ರಜ್ಯೋತಿ ಸುದ್ದಿ ವಾಹಿನಿ ವಿರುದ್ಧ ಬಿಜೆಪಿ ಗರಂ ಆಗಿದೆ. ವಿಷಯಕ್ಕೆ ಸಂಬಂಧಿಸಿ ಆಂಧ್ರ ಪ್ರದೇಶ ಬಿಜೆಪಿ ಘಟಕ ಎಬಿಎನ್ ಆಂಧ್ರಜ್ಯೋತಿ ಮತ್ತು ಅದರ ಸಹಸಂಸ್ಥೆ ಆಂಧ್ರಜ್ಯೋತಿ ದಿನಪತ್ರಿಕೆಗೆ ಬಹಿಷ್ಕಾರ ಹಾಕಿದೆ.

- Advertisement -

ಎಬಿಎನ್ ಟಿವಿ ಮತ್ತು ಆಂಧ್ರಜ್ಯೋತಿಗೆ ಬಹಿಷ್ಕಾರ ಹಾಕಲು ಬಿಜೆಪಿ ನಿರ್ಧರಿಸಿದೆ. ಅದು ಟಿಡಿಪಿಯ ಕರಪತ್ರದಂತೆ ಕೆಲಸ ಮಾಡುತ್ತಿದೆ ಮತ್ತು ಮಾಧ್ಯಮ ಗುಣಮಟ್ಟ ಹಾಗೂ ನೈತಿಕ ಮೌಲ್ಯಗಳನ್ನು ಕಳೆದುಕೊಂಡಿದೆ ಎಂದು ಬಿಜೆಪಿ ರಾಜ್ಯ ಕಚೇರಿ ಕಾರ್ಯದರ್ಶಿ ಪಿ. ಶ್ರೀನಿವಾಸ್ ರಾವ್ ಹೇಳಿದ್ದಾರೆ.

ಎಬಿಎನ್ ಟಿವಿ ವಾಹಿನಿಯಲ್ಲಿ ನಡೆದ ಇತ್ತೀಚಿನ ಚರ್ಚಾಕೂಟವೊಂದರಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಷ್ಣುವರ್ಧನ್ ರೆಡ್ಡಿ ಅವರಿಗೆ ಚರ್ಚೆಯಲ್ಲಿ ಭಾಗವಹಿಸಿದ್ದ ಸಾಮಾಜಿಕ ಕಾರ್ಯಕರ್ತರೊಬ್ಬರು ಚಪ್ಪಲಿ ಎಸೆದು ಅವಮಾನಿಸಿದ್ದರು.  

Join Whatsapp