ಮಂಗಳೂರಿನ RSS ಮುಖಂಡನ ಹನಿಟ್ರ್ಯಾಪ್ ಕೇಸ್ ಗೆ ಬಿಗ್ ಟ್ವಿಸ್ಟ್

Prasthutha|

►ಲೆಕ್ಚರರ್ ಎಂದು ಪುಸಲಾಯಿಸಿ ವಿದ್ಯಾರ್ಥಿನಿಯನ್ನು ಲಾಡ್ಜ್ ಗೆ ಕರೆಸಿಕೊಂಡು ಸಲ್ಮಾ ಗ್ಯಾಂಗ್ ಗೆ ಸಿಕ್ಕಿಬಿದ್ದ ಜಗನ್ನಾಥ್ ಶೆಟ್ಟಿ!

- Advertisement -

ಬೆಂಗಳೂರು:  ಆರ್ ಎಸ್ ಎಸ್ ಮುಖಂಡ ಹನಿಟ್ರ್ಯಾಪ್ ಸುಲಿಗೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಅಸಲಿ ಕಾರಣ ಬಹಿರಂಗಗೊಂಡಿದೆ.

ಅಸಲಿ ಕಾರಣ ಏನೆಂದರೆ, ಚಿನ್ನದ ವ್ಯಾಪಾರಿ, ಆರ್ ಎಸ್ ಎಸ್ ಮುಖಂಡ ಜಗನ್ನಾಥ್ ಶೆಟ್ಟಿ ಲೆಕ್ಚರರ್ ಎಂದು ಪುಸಲಾಯಿಸಿ ವಿದ್ಯಾರ್ಥಿನಿಯನ್ನು  ಲಾಡ್ಜ್ ಗೆ ಕರೆಸಿಕೊಂಡು ಹೋಗಿದ್ದ. ಈ ಸಮಯದಲ್ಲಿ ಸಲ್ಮಾ ಗ್ಯಾಂಗ್ ನುಗ್ಗಿದ್ದು, ಯುವತಿ ಜೊತೆ ಜಗನ್ನಾಥ್ ಶೆಟ್ಟಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ.

- Advertisement -

ವಿದ್ಯಾರ್ಥಿನಿಯನ್ನು ಲಾಡ್ಜ್ ಗೆ ಕರೆಸಿಕೊಳ್ಳಲು ತಾನು ಲೆಕ್ಚರ್ ಎಂದು ಆರ್ ಎಸ್ ಎಸ್ ಮುಖಂಡ ಜಗದೀಶ್ ಶೆಟ್ಟಿ ಪುಸಲಾಯಿಸಿದ್ದನು. ಮೈಸೂರಿನ ಲಾಡ್ಜ್ ಗೆ ವಿದ್ಯಾರ್ಥಿನಿಯನ್ನು ಕರೆಸಿಕೊಂಡ ವೇಳೆ ಅಲ್ಲಿಗೆ ಆಗಮಿಸಿದ ಸಲ್ಮಾಬಾನು ಆಂಡ್ ಟೀಂ ಪಂಚೆ, ಬನಿಯನ್ ನಲ್ಲಿದ್ದ ಜಗನಾಥ್ ಶೆಟ್ಟಿಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಜಗದೀಶ್ ಶೆಟ್ಟಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹೆದರಿಸಿದ್ದಾರೆ. ಈ ವೇಳೆ ತನ್ನದು ತಪ್ಪಾಯ್ತು ಬಿಟ್ಟುಬಿಡಿ ಎಂದು ಜಗನ್ನಾಥ್ ಶೆಟ್ಟಿ ಕಾಲಿಗೆ ಬಿದ್ದಿದ್ದಾನೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಜಗನ್ನಾಥ್ ಶೆಟ್ಟಿ ಆಗಸ್ಟ್ 19ರಂದು ಮಂಡ್ಯದ ಪಶ್ಚಿಮ ಠಾಣೆಗೆ ಕಿಡ್ನಾಪ್ ಮತ್ತು ಹನಿಟ್ರ್ಯಾಪ್ ದೂರು ನೀಡಿದ್ದು, ರೂಮ್  ನಲ್ಲಿ ಯುವತಿ ಜೊತೆ ವೀಡಿಯೋ ಚಿತ್ರೀಕರಿಸಿಕೊಂಡು ಬಳಿಕ 4 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎಂದು ಜಗನ್ನಾಥ್ ಶೆಟ್ಟಿ ಆರೋಪಿಸಿದ್ದನು. ದೂರಿನ ಆಧಾರದಲ್ಲಿ ಸಮಾಜ ಸೇವಾಹೋರಾಟದಲ್ಲಿ ಗುರುತಿಸಿಕೊಂಡಿದ್ದ ಸಲ್ಮಾಬಾನು ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದರು.

Join Whatsapp