ಇಂದು ಆಂಧ್ರಕ್ಕೆ ಪ್ರವೇಶಿಸಲಿರುವ ಭಾರತ್‌ ಜೋಡೊ ಯಾತ್ರೆ

Prasthutha|

ಚಿತ್ರದುರ್ಗ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ‘ಭಾರತ್‌ ಜೋಡೊ ಯಾತ್ರೆ’ಯು ಆಂಧ್ರ ಪ್ರದೇಶವನ್ನು ಪ್ರವೇಶಿಸಲಿದ್ದು, ಶುಕ್ರವಾರ (ಇಂದು) ಸಂಜೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಒಬಲಾಪುರಂನಲ್ಲಿ ರಾಹುಲ್‌ ಗಾಂಧಿ ಅವರು ಸ್ವಲ್ಪ ಸಮಯ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ತಿಳಿಸಿದ್ದಾರೆ.

- Advertisement -


‘ಭಾರತ್‌ ಜೋಡೊ ಯಾತ್ರೆ ಹೋದ ಕಡೆಗಳಲ್ಲೆಲ್ಲಾ ಪ್ರೀತಿಯ ಮಹಾಪೂರವೇ ಹರಿದು ಬರುತ್ತಿದ್ದು, ತಮಿಳುನಾಡು, ಕೇರಳ, ಕರ್ನಾಟಕದಲ್ಲೆಲ್ಲಾ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಮತ್ತೊಂದು ಮೈಲುಗಲ್ಲಾಗುವ ದಿನ ನಮ್ಮ ಮುಂದಿದೆ. ಆಂಧ್ರ ಪ್ರದೇಶದಲ್ಲಿನ ನಮ್ಮ ಚುಟುಕು ಯಾತ್ರೆಯಲ್ಲಿ ಪಾಲ್ಗೊಳ್ಳಿ’ ಎಂದು ಭಾರತ್‌ ಜೋಡೊ ಯಾತ್ರೆ ತಂಡ ಟ್ವೀಟ್‌ ಮಾಡಿದೆ.


ಚಿತ್ರದುರ್ಗದ ಮೊಳಕಾಲ್ಮುರು ತಾಲೂಕಿನ ರಾಂಪುರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಬೆಂಬಲಿಗರ ಜೊತೆ ರಾಹುಲ್‌ ಗಾಂಧಿ ಶುಕ್ರವಾರ ಬೆಳಿಗ್ಗೆ ಕಾಲ್ನಡಿಗೆ ಆರಂಭಿಸಿದ್ದಾರೆ.

Join Whatsapp