ಬೆಳ್ತಂಗಡಿ | ಹಿಂಸಾತ್ಮಕವಾಗಿ ಗೋವು ಸಾಗಾಟ: ನಾಗೇಶ್ ಶೆಟ್ಟಿ ಸೇರಿ ಮೂವರ ಬಂಧನ

Prasthutha|

ಬೆಳ್ತಂಗಡಿ: ಕಾರಿನಲ್ಲಿ ಹಿಂಸಾತ್ಮಕವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ ಘಟನೆ ತಾಲೂಕಿನ ನಡ ಎಂಬಲ್ಲಿ ನಡೆದಿದೆ.

- Advertisement -


ಬಂಧಿತರನ್ನು ನಾಗೇಶ್ ಶೆಟ್ಟಿ, ರಝಾಕ್ ಪಿ. ಹಾಗೂ ಮುಹಮ್ಮದ್ ರಫೀಕ್ ಎಂದು ಗುರುತಿಸಲಾಗಿದ್ದು, ಕಾರು ಚಾಲಕ ರವೂಫ್ ಎಂಬಾತ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.


ಬುಧವಾರ ರಾತ್ರಿ 11.30 ಗಂಟೆ ಸುಮಾರಿಗೆ ನರಸಿಂಹ ಗಡ ಎಂಬಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬೆಳಕಿಗೆ ಬಂದಿದ್ದು, ಕಾರು ಪರಿಶೀಲಿಸಿದಾಗ ಹಿಂಸಾತ್ಮಕ ರೀತಿಯಲ್ಲಿ ಗೋವು ಪತ್ತೆಯಾಗಿದೆ.

Join Whatsapp