ಬೆಳ್ತಂಗಡಿ: ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

Prasthutha|

ಬೆಳ್ತಂಗಡಿ: ಬೆಳಾಲು ಗ್ರಾಮದ ಕೂಡಿಗೆ ಎಂಬಲ್ಲಿ ಹೊಳೆ ಬದಿ ಕೊಳೆತ ಸ್ಥಿತಿಯಲ್ಲಿ ಗುರುತು ಪತ್ತೆ ಸಿಗದ ಮೃತದೇಹವೊಂದು ಆ. 27ರಂದು ಪತ್ತೆಯಾಗಿದೆ.

- Advertisement -

ಯಾದವ ಎಂಬವರು ಹಳ್ಳಿಮದ್ದಿಗೆಂದು ಮದ್ದಿನ ಗಿಡಗಳನ್ನು ಸಂಗ್ರಹಿಸಲು ಕಾಡಿಗೆ ತೆರಳಿದ್ದಾಗ ಹೊಳೆಯ ಬದಿಯಲ್ಲಿರುವ ಕಲ್ಲುಗಳ ಮಧ್ಯೆ ಸುಮಾರು 40-45 ವರ್ಷ ಪ್ರಾಯದ ಅಪರಿಚಿತ ಗಂಡಸು ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಅವರು ನೀಡಿದ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp