ಬಿಹಾರದಲ್ಲಿ ಮುಂದುವರೆದ ಬ್ಯಾಂಕ್ ಅಧಿಕಾರಿಗಳ ಎಡವಟ್ಟು: ರೈತನ ಖಾತೆಗೆ 52 ಕೋಟಿ ರೂ. ಜಮೆ

Prasthutha|

ಬಿಹಾರ: ಕಳೆದ ಕೆಲವು ದಿನಗಳಲ್ಲಿ ಯಾರ್ಯಾರದ್ದೋ ಬ್ಯಾಂಕ್​ ಅಕೌಂಟ್​ ಗಳಿಗೆ ಏಕಾಏಕಿ ಹಣ ಜಮೆ ಆಗುತ್ತಿದೆ.ಇಂದು ಮತ್ತೆ ಬಿಹಾರ ಬಡ ರೈತನ ಖಾತೆಗೆ 52 ಕೋಟಿ ರೂಪಾಯಿ ಜಮೆ ಆಗಿದೆ.

- Advertisement -

ಈ ಬಾರಿ ಹೀಗೆ ಅನುಭವ ಆಗಿದ್ದು ಬಡ ರೈತ ರಾಮ್ ​ಬಹದ್ದೂರ್​ ಶಾ ಎಂಬುವರಿಗೆ ಇವರು ತಮ್ಮ ಪಿಂಚಣಿಯ ಬಗ್ಗೆ ವಿಚಾರಿಸಲು ಸಮೀಪದ ಗ್ರಾಹಕರ ಸೇವಾ ಕೇಂದ್ರಕ್ಕೆ ಭೇಟಿ ನೀಡಿದ್ದರು. ಅಲ್ಲಿ ಹೋಗಿ ಆಧಾರ್​ ಕಾರ್ಡ್​ ನೀಡಿ, ತಮ್ಮ ಹೆಬ್ಬೆರಳನ್ನು ಪಂಚ್​ ಮಾಡಿ ದೃಢೀಕರಣ ಮಾಡಿದ ಬಳಿಕ ಅಕೌಂಟ್ ​ನಲ್ಲಿರುವ ಹಣದ ಮೊತ್ತ ಹೇಳಲಾಯಿತು. ಆ ಮೊತ್ತವನ್ನು ನೋಡಿ ಸಿಎಸ್ ​ಪಿ ಅಧಿಕಾರಿ ಮತ್ತು ರಾಮ್​ ಬಹದ್ದೂರ್ ಶಾ ಇಬ್ಬರಿಗೂ ಶಾಕ್​ ಆಗಿದೆ.  ಈ ಹಣ ಎಲ್ಲಿಂದ ಬಂತು ಎಂಬುದು ಗೊತ್ತಿಲ್ಲ ಎಂದು ರಾಮ್​ ಬಹದ್ದೂರ್​ ಶಾ ತಿಳಿಸಿದ್ದಾರೆ.

ಎರಡು ದಿನಗಳ ಹಿಂದೆ ಖಗಾರಿಯಾ ಎಂಬಲ್ಲಿ ರಂಜಿತ್ ಎಂಬುವರ ಅಕೌಂಟ್ ​ಗೆ 5.5 ಲಕ್ಷ ರೂಪಾಯಿ ಬಂದಿತ್ತು. ನಿನ್ನೆ ಇಬ್ಬರು ಶಾಲೆಗೆ ಹೋಗುವ ಬಾಲಕರ ಖಾತೆಗೆ ಕೋಟ್ಯಂತರ ರೂಪಾಯಿ ಜಮಾ ಆಗಿತ್ತು. ಕತಿಹಾರ ಜಿಲ್ಲೆಯ ಪಾಸ್ಟಿಯಾ ಗ್ರಾಮದ ಬಾಲಕ ಅಸಿತ್​ ಕುಮಾರ್ ಖಾತೆಗೆ 900 ಕೋಟಿ ರೂಪಾಯಿ ಬಂದಿದ್ದರೆ, ಗುರುಚಂದ್ರ ವಿಶ್ವಾಸ್​ ಎಂಬುವನ ಖಾತೆಗೆ 60 ಕೋಟಿ ರೂ.ವರ್ಗಾವಣೆಯಾಗಿತ್ತು.

Join Whatsapp