ಬೆಂಗಳೂರು: ರೌಡಿಗಳ‌ ಮನೆ ಮೇಲೆ ಮುಂದುವರೆದ ದಾಳಿ

Prasthutha|

ಬೆಂಗಳೂರು,ಆ.2: ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಇಳಿದಿರುವ ನಗರ ಪೊಲೀಸರು, ಸೋಮವಾರ ರೌಡಿಗಳ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

- Advertisement -

ಪಶ್ಚಿಮ ವಿಭಾಗದ ರೌಡಿಗಳ ಮನೆ ಮೇಲೆ ನಿನ್ನೆಯಷ್ಟೇ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದ ಪೊಲೀಸರು, ಇಂದು ಕೆ.ಪಿ.ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪುಡಿ ರೌಡಿಗಳನ್ನು ಪತ್ತೆ ಮಾಡಿ‌ ಪಾಠ ಕಲಿಸಿದ್ದಾರೆ.

ಡಿಸಿಪಿ ಡಾ. ಸಂಜೀವ್ ಪಾಟೀಲ್ ನೇತೃತ್ವದಲ್ಲಿ ಎಸಿಪಿ, ಇನ್ಸ್ ಪೆಕ್ಟರ್ಗಳ ತಂಡ ಮಾಗಡಿ ರಸ್ತೆ, ಕೆ.ಪಿ. ಅಗ್ರಹಾರ ಠಾಣಾ ವ್ಯಾಪ್ತಿಯ ಪ್ರಮುಖ ರೌಡಿಗಳಾದ ಅಮೀರ್ ಪಾಷ, ವಿಜಯ್, ವೇಣುಗೋಪಾಲ, ವೆಂಕಟೇಶ್ ಕುಮಾರ್, ಸ್ಟೀಪನ್ ಮತ್ತು ಗೋಪಾಲ್ ಸೇರಿದಂತೆ 45 ಕ್ಕೂ ಹೆಚ್ಚು ರೌಡಿಶೀಟರ್ ಮನೆಗಳ ಮನೆ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.

- Advertisement -

ಜೊತೆಗೆ ನಗರದಲ್ಲಿ ಅಪರಾಧ ಕೃತ್ಯಗಳಲ್ಲಿ ಸಕ್ರಿಯರಾಗಿರುವ ರೌಡಿಗಳಿಗೆ ಸಾಥ್ ನೀಡುತ್ತಿರುವ ಪುಡಿ ರೌಡಿಗಳ ಮನೆ ಮೇಲೆ ಸಹ ದಾಳಿ ನಡೆಸಲಾಗಿದೆ.



Join Whatsapp