ಬೆಂಗಳೂರು: ನೌಕಾಸೇನೆಯ ಅಧಿಕಾರಿಯ ಪುತ್ರ ನಾಲ್ಕನೇ ಮಹಡಿಯಿಂದ ಬಿದ್ದು ಸಾವು

Prasthutha|

ಬೆಂಗಳೂರು: ನೌಕಾಸೇನೆಯ ಅಧಿಕಾರಿಯೊಬ್ಬರ ಪುತ್ರ, ಪಿಯುಸಿ ವಿದ್ಯಾರ್ಥಿ ತಾನು ವಾಸವಿದ್ದ ಅಪಾರ್ಟ್’ಮೆಂಟ್’ನ ನಾಲ್ಕನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

- Advertisement -

ಭಾರತೀಯ ನೌಕಾಪಡೆಯ ಅಧಿಕಾರಿ ಸೆಲ್ವಿರಾಜ್-ಮನಿಷಾ ದಂಪತಿಯ ಪುತ್ರ ಸೂರ್ಯಕಾಂತ್ (16) ಮೃತಪಟ್ಟ ವಿದ್ಯಾರ್ಥಿ. ಬೆಂಗಳೂರಿನ ಬೇಗೂರು-ಕೊಪ್ಪ ರಸ್ತೆಯಲ್ಲಿರುವ SNN ಅಪಾರ್ಟ್’ಮೆಂಟ್’ನಲ್ಲಿ ಘಟನೆ ನಡೆದಿದ್ದು, ಅಪಾರ್ಟ್’ಮೆಂಟ್’ನ ಮಟ್ಟಿಲಿನಲ್ಲಿ ರಕ್ತಸಿಕ್ತವಾಗಿದ್ದ ಸೂರ್ಯಕಾತ್ ಮೃತದೇಹ ಪತ್ತೆಯಾಗಿದೆ. ಕಿಟಕಿಯ ಬಳಿ ಓದಲು ಕುಳಿತಿದ್ದ ಸೂರ್ಯಕಾಂತ್ ಆಯತಪ್ಪಿ ಬಿದ್ದಿರುವುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

ಕೇರಳದ ಮೂಲದ ಸೆಲ್ವಿರಾಜ್ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ಕಳೆದ 8 ವರ್ಷಗಳಿಂದ SNN ಅಪಾರ್ಟ್’ಮೆಂಟ್’ನಲ್ಲಿ ವಾಸವಾಗಿದ್ದರು. ಮೃತ ಸೂರ್ಯಕಾಂತ್ ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷ PUC ವಿದ್ಯಾರ್ಥಿಯಾಗಿದ್ದ. ಘಟನೆ ನಡೆದ ವೇಳೆ ಎಲ್ಲರೂ ಮನೆಯೊಳಗೆ ಇದ್ದರೂ ಸಹ, ಘಟನೆ ನಡೆದಿರುವುದು ಯಾರಿಗೂ ಗೊತ್ತಾಗಿರಲಿಲ್ಲ. ಜೋರಾದ ಶಬ್ಧ ಕೇಳಿ ಓಡಿಬಂದ ಅಪಾರ್ಟ್’ಮೆಂಟ್’ನ ನಿವಾಸಿಗಳು, ಮೆಟ್ಟಿಲಿನಲ್ಲಿ ರಕ್ತಸಿಕ್ತವಾಗಿದ್ದ ಸೂರ್ಯಕಾತ್ ಮೃತದೇಹವನ್ನು ಕಂಡು ಹೌಹಾರಿದ್ದಾರೆ. ಮರಣೋತ್ತರ ಪರೀಕ್ಷೆ ಪ್ರಕ್ರಿಯೆಗಳ ಬಳಿಕ ಮೃತದೇಹವನ್ನ ಪೋಷಕರಿಗೆ ಹಸ್ತಾಂತರಿಸಲಾಗಿದ್ದು, ಬೇಗೂರು ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

Join Whatsapp