ಮಂಗಳೂರಿನಲ್ಲಿ ಮತ್ತೆ ಸಂಘಪರಿವಾರದ ಕಾರ್ಯಕರ್ತರ ಅನೈತಿಕ ಪೊಲೀಸ್ ಗಿರಿ

Prasthutha|

ಮಂಗಳೂರು: ತಡರಾತ್ರಿ ಸುತ್ತಾಡುತ್ತಿದ್ದ ಯುವಕ ಯುವತಿಯರ ಮೇಲೆ ಭಜರಂಗದಳದ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ ಘಟನೆ ನಗರದ ಕೊಟ್ಟಾರ ಎಂಬಲ್ಲಿ ನಡೆದಿದೆ.

- Advertisement -

ರಾತ್ರಿ 12 ಗಂಟೆ ಸುಮಾರಿಗೆ ಊಟಕ್ಕೆಂದು ಹೋಟೇಲ್ ಹುಡುಕಿಕೊಂಡು ಹೊರಟಿದ್ದ ಯುವಕ ಯುವತಿಯರನ್ನು ತಡೆದು ನಿಲ್ಲಿಸಿದ ಭಜರಂಗದಳದ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ್ದಾರೆ.

ಹೊಟೇಲ್ ಗೆ ಊಟಕ್ಕೆ ಬಂದಿರುವುದಾಗಿ ಹೇಳಿದ ಯುವಕ, ಯುವತಿಯರೊಂದಿಗೆ” ಮಧ್ಯರಾತ್ರಿ ಯಾವ ಹೊಟೇಲ್ ಇದೆ ಎಂದು ಪ್ರಶ್ನಿಸಿದ ಸಂಘಪರಿವಾರದ ಗೂಂಡಾಗಳು ಹಲ್ಲೆಗೆ ಮುಂದಾಗಿದ್ದರು.  ಪೊಲೀಸರ ಮಧ್ಯ ಪ್ರವೇಶದ ಬಳಿಕ ಪರಿಸ್ಥಿತಿ ತಿಳಿಗೊಂಡಿದ್ದು,  ಪೊಲೀಸ್ ಠಾಣೆಗೆ ತೆರಳಿದ ಯುವಕ, ಯುವತಿಯರು ಬಳಿಕ ಅಲ್ಲಿಂದ ಹೊರಟಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರುಗಳು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

Join Whatsapp