ಜಹಾಂಗೀರ್ ಪುರಿ ಘಟನೆ : ಬುಲ್ಡೋಜರ್ ಕಾರ್ಯಾಚರಣೆಗೆ ‘ಬಹುತ್ವ ಕರ್ನಾಟಕ’ ತೀವ್ರ ಆಕ್ಷೇಪ

Prasthutha|

ಬೆಂಗಳೂರು: ಮುಸ್ಲಿಮರ ಮನೆಗಳನ್ನು ಗುರಿಯಾಗಿಸಿ ದೆಹಲಿಯ ಜಹಂಗೀರ್ ಪುರಿಯಲ್ಲಿ ನಡೆದ ಬುಲ್ಡೋಜರ್ ಕಾರ್ಯಾಚರಣೆಗೆ ದೇಶವ್ಯಾಪಿ ಖಂಡನೆ ವ್ಯಕ್ತವಾಗತೊಡಗಿದೆ. ಗುರುವಾರ ರಾಜ್ಯದಲ್ಲೂ ‘ಬಹುತ್ವ ಕರ್ನಾಟಕ’ ವತಿಯಿಂದ ವಿಶಿಷ್ಠ ರೀತಿಯ ಪ್ರತಿಭಟನೆ ನಡೆಯಿತು.

- Advertisement -

ಹಲವರು ಭಿತ್ತಿಪತ್ರಗಳನ್ನು ಹಿಡಿದು ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು. ಜೊತೆಗೆ, ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ಗಳಲ್ಲೂ #StopDemolitionOfMuslimHomes ಎಂಬ ಹ್ಯಾಷ್ ಟ್ಯಾಗ್ ನಡಿ ಬಹುತ್ವ ಕರ್ನಾಟಕ ವೇದಿಕೆಯಡಿ ಅಭಿಯಾನವನ್ನು ನಡೆಸಿದರು.

ಮಹಿಳೆಯರು, ಮಕ್ಕಳು, ಯುವ ಸಮುದಾಯವು ಈ ವಿಭಿನ್ನ ಪ್ರತಿಭಟನೆಯಲ್ಲಿ ಭಾಗವಹಿಸಿ ಕೇಂದ್ರ ಸರಕಾರ ಹಾಗೂ ಆಪ್ ನೇತೃತ್ವದ ದೆಹಲಿ ಸರಕಾರದ ವಿರುದ್ಧವೂ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

- Advertisement -

ಮನೆಗಳಲ್ಲಿ, ನಗರದ ಪ್ರಮುಖ ಬೀದಿಗಳಲ್ಲಿ, ಕರ್ತವ್ಯದ ಸ್ಥಳಗಳಲ್ಲೂ ನಿಂತು ಭಿತ್ತಿಪತ್ರ ಹಿಡಿದು ಗಮನ ಸೆಳೆದರು.

Join Whatsapp