ಅಸ್ಸಾಮ್ ನಲ್ಲಿ ಜಾನುವಾರು ಹತ್ಯೆ ತಡೆ ಮಸೂದೆ ಜಾರಿ: ಧಾರ್ಮಿಕ ಕೇಂದ್ರದ 5 ಕಿ.ಮೀ. ವ್ಯಾಪ್ತಿಯಲ್ಲಿ ಗೋಹತ್ಯೆ, ಮಾರಾಟ ನಿಷೇಧ

Prasthutha|

ಗುವಾಹಟಿ: ಅಸ್ಸಾಮ್ ನ ಬಿಜೆಪಿ ಸರ್ಕಾರ ಆಗಸ್ಟ್ 13 ರಂದು ವಿಧಾನ ಸಭೆಯಲ್ಲಿ ಗೋಹತ್ಯೆ ತಡೆ ಮಸೂದೆಯನ್ನು ಅಂಗೀಕರಿಸಿದೆ.
ಈ ಮಸೂದೆಯನ್ವಯ ಇನ್ನು ಮುಂದಕ್ಕೆ ಅಸ್ಸಾಮ್ ನಿಂದ ಹಸುವನ್ನು ಬೇರೆ ರಾಜ್ಯಕ್ಕೆ ಸಾಗಿಸುವಂತಿಲ್ಲ. ಮಾತ್ರವಲ್ಲದೆ ನೂತನ ಕಾಯ್ದೆಯಿಂದಾಗಿ ದೇವಸ್ಥಾನ ಅಥವಾ ಹಿಂದೂ ಧಾರ್ಮಿಕ ಕೇಂದ್ರದ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಗೋಹತ್ಯೆ, ಮಾರಾಟ, ಗೋಮಾಂಸ ಖರೀದಿಗೆ ಬ್ರೇಕ್ ಬೀಳಲಿದೆ.

- Advertisement -

ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಅಸ್ಸಾಮ್ ವಿಧಾನಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದರು. ಮಾತ್ರವಲ್ಲದೆ ಪ್ರತಿಪಕ್ಷಗಳು ಈ ಮಸೂದೆಗೆ ತಿದ್ದುಪಡಿಗೆ ಶಿಫಾರಸು ಮಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಸರಿಯಾದ ಸಲಹೆ ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಈ ಮಸೂದೆಯನ್ನು ಅಂಗೀಕರಿಸಲಾಗಿದೆಯೆಂದು ಘೋಷಿಸಿದರು.ಗೋಮಾಂಸ ಸೇವಿಸದ ಜನರ ಸಮ್ಮುಖದಲ್ಲಿ ಗೋಮಾಂಸ ಸೇವಿಸುವುದು ಈ ಕಾನೂನಿನ ಅನ್ವಯ ಅಪರಾಧವಾಗಿದೆಯೆಂದು ಅವರು ಮಾಧ್ಯಮಕ್ಕೆ ತಿಳಿಸಿದರು.

ನೂತನವಾಗಿ ಜಾರಿಯಾದ ಗೋಹತ್ಯೆ ತಡೆ ಕಾಯ್ದೆ ಪ್ರಕಾರ ಇನ್ನು ಮುಂದಕ್ಕೆ ದೇವಸ್ಥಾನ, ಮಠದ 5 ಕಿ.ಮೀ ವ್ಯಾಪ್ತಿಯೊಳಗೆ ಯಾವುದೇ ರೀತಿಯ ಗೋಹತ್ಯೆ, ಗೋಮಾಂಸ ಖರೀದಿ ನಡೆಸುವಂತಿಲ್ಲ. ಮಾತ್ರವಲ್ಲದೆ ಹಿಂದುಗಳು, ಸಿಖ್ಖರು, ಜೈನರು, ಮುಸ್ಲಿಮರ ಗೋಮಾಂಸ ಸೇವನೆಗೆ ತಡೆ ಬೀಳಲಿದೆಯೆಂದು ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

Join Whatsapp