8-9 ದಿನ ನನಗೆ ನಿದ್ದೆ ಬಂದಿರಲಿಲ್ಲ : ಐಪಿಎಲ್‌ ಅರ್ಧದಲ್ಲೇ ತೊರೆದ ಕಾರಣ ಬಹಿರಂಗಪಡಿಸಿದ ಆರ್.‌ ಅಶ್ವಿನ್

Prasthutha|

 ನವದೆಹಲಿ : ಈ ವರ್ಷದ ಐಪಿಎಲ್‌ ನಿಂದ ದೆಹಲಿ ಕ್ಯಾಪಿಟಲ್‌ ನ ಹಿರಿಯ ಬೌಲರ್‌ ಆರ್.‌ ಅಶ್ವಿನ್‌ ಮಧ್ಯದಲ್ಲೇ ಹೊರಹೋಗಿದ್ದರು. ತಮ್ಮ ಮನೆಯವರಿಗೆ ಕೋವಿಡ್‌ ಸೋಂಕು ಹರಡಿದ್ದುದರಿಂದ, ಅವರಿಗೆ ಸಹಾಯ ಮಾಡಲು ತಾವು ಪಂದ್ಯದಿಂದ ವಿರಾಮ ಪಡೆಯುವುದಾಗಿ ಅವರು ಹೇಳಿದ್ದರು. ಅರ್ಧದಲ್ಲೇ ಐಪಿಎಲ್‌ ತೊರೆಯುವಾಗ ತನ್ನೊಳಗಿದ್ದ ಸಂಕಟಗಳನ್ನು ಅಶ್ವಿನ್‌ ಬಹಿರಂಗ ಪಡಿಸಿದ್ದಾರೆ.

ಈ ವೇಳೆ ತಾವು ತಮ್ಮ ಮನೆಯವರ ಸುರಕ್ಷತೆಯ ಬಗ್ಗೆ ತೀವ್ರ ಭಯಭೀತನಾಗಿದ್ದೆ. 8-9 ದಿನ ಸರಿಯಾಗಿ ನಿದ್ದೆಯೂ ಬರುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ. ಅಶ್ವಿನ್‌ ಅವರ ಮನೆಯಲ್ಲಿ ಬಹುತೇಕ ಎಲ್ಲರಿಗೂ ಸೋಂಕು ತಗುಲಿತ್ತು. ಇನ್ನೊಂದೆಡೆ, ತಮಗೆ ಮುಂದಿನ ಆಟಗಳನ್ನು ಆಡುವ ಸಾಮರ್ಥ್ಯ ಉಳಿಯಲಿದೆಯೇ? ಇಲ್ಲವೇ? ಎಂಬ ಆತಂಕವೂ ತಮ್ಮನ್ನು ಕಾಡುತಿತ್ತು ಎಂದು ಅಶ್ವಿನ್‌ ಹೇಳಿದ್ದಾರೆ.

- Advertisement -

ಐಪಿಎಲ್‌ ನಲ್ಲಿ ಭಾಗಿಯಾಗಿದ್ದವರೊಳಗೆ ಹಲವರಿಗೆ ಕೋವಿಡ್‌ ಸೋಂಕು ತಗುಲಿದ ಹಿನ್ನೆಲೆಯಲ್ಲಿ, ಅಂತಿಮವಾಗಿ ಬಿಸಿಸಿಐ ಕೂಡ ಐಪಿಎಲ್‌ ಅರ್ಧಕ್ಕೆ ಸ್ಥಗಿತಗೊಳಿಸಿತ್ತು.

- Advertisement -