ದಿಡ್ಡಳ್ಳಿ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿದ ಕೆಪಿಸಿಸಿ ವಕ್ತಾರ ಎ.ಎಸ್. ಪೊನ್ನಣ್ಣ

Prasthutha|

ಕುಶಾಲನಗರ: ದಿಡ್ಡಳ್ಳಿ ಪುನರ್ವಸತಿ ಕೇಂದ್ರಕ್ಕೆ ಕೆಪಿಸಿಸಿ ವಕ್ತಾರರಾದ ಎ.ಎಸ್. ಪೊನ್ನಣ್ಣ ಭೇಟಿ ನೀಡಿದರು. ಪುನರ್ವಸತಿಯ ನಿವಾಸಿಗಳು ಎ.ಎಸ್. ಪೊನ್ನಣ್ಣ ತಮ್ಮ ಕೇಂದ್ರಕ್ಕೆ ಭೇಟಿ ನೀಡುವಂತೆ ಕೋರಿದ್ದರು. ಅಲ್ಲದೇ ನಿವಾಸಿಗಳು ಬಡಾವಣೆಯ ಹೆಸರನ್ನು ದೊರೆಸ್ವಾಮಿ/ಎ.ಕೆ ಸುಬ್ಬಯ್ಯ ನಗರ ಎಂದು ನಾಮಕರಣ ಮಾಡುವಂತೆ ವಿನಂತಿಸಿದ್ದರು. ಈ ನಿಟ್ಟಿನಲ್ಲಿ ಎ.ಎಸ್. ಪೊನ್ನಣ್ಣ ಭೇಟಿ ನೀಡಿ ಬಡಾವಣೆಗೆ ನಾಮಕರಣವನ್ನು ಮಾಡಿದರು.

- Advertisement -

ಭೇಟಿ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಜಿ.ಪಂ ಮಾಜಿ ಸದಸ್ಯ ವಿ.ಪಿ. ಶಶಿಧರ್, ಮಾಜಿ ಅಧ್ಯಕ್ಷ ರಾಜರಾವ್, ಗ್ರಾ.ಪಂ ಸದಸ್ಯ ಟಿ.ಪಿ. ಹಮೀದ್, ದಿಡ್ಡಳ್ಳಿ ಹೋರಾಟಗಾರ್ತಿ ಅನಿತಾ, , ಯುವ ಕಾಂಗ್ರೆಸ್ ನ ಹನಿಫ್ ಸಂಪಾಜೆ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಸೂರಜ್ , ಯುವ ನಿರ್ವಾಣಪ್ಪ ಉಪಸ್ಥಿತರಿದ್ದರು.

Join Whatsapp