ಜೈಲಿನ ಕೋವಿಡ್ – 19 ಕೇಂದ್ರವೆಂದು ಗೊತ್ತುಪಡಿಸಿದ ಶಾಲೆಯಲ್ಲಿ ರಾತ್ರಿ ಕಳೆದ ಗೋಸ್ವಾಮಿ

Prasthutha|

ಜೈಲಿನ ಕೋವಿಡ್ – 19 ಕೇಂದ್ರವೆಂದು ಗೊತ್ತುಪಡಿಸಿದ ಶಾಲೆಯಲ್ಲಿ ರಾತ್ರಿ ಕಳೆದ ಗೋಸ್ವಾಮಿ
ಮುಂಬೈ : ಆತ್ಮಹತ್ಯೆ ಪ್ರಚೋದನೆ ಪ್ರಕರಣದಲ್ಲಿ ಬಂಧಿತನಾಗಿರುವ ‘ರಿಪಬ್ಲಿಕ್ ಟಿವಿ’ ಸಂಪಾದಕ, ಬಿಜೆಪಿ ಬೆಂಬಲಿಗ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಅಲಿಬಾಗ್ ಜೈಲಿಗೆ ಕೋವಿಡ್ ಕೇಂದ್ರವೆಂದು ಗೊತ್ತುಪಡಿಸಿದ್ದ ಪರಿಷತ್ ಶಾಲೆಯಲ್ಲಿ ರಾತ್ರಿ ಕಳೆದಿದ್ದಾನೆ.
ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಅಲಿಬಾಗ್ ನಲ್ಲಿ ನ್ಯಾಯಾಲಯವು ಗೋಸ್ವಾಮಿ ಮತ್ತು ಇತರ ಇಬ್ಬರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಗೋಸ್ವಾಮಿಗೆ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿತ್ತು. ಬಳಿಕ, ಆತನನ್ನು ಅಲಿಬಾಗ್ ನಗರ ಪರಿಷತ್ ಶಾಲೆಗೆ ಕರೆದೊಯ್ಯಲಾಗಿತ್ತು. ಅಲಿಬಾಗ್ ಜೈಲಿನ ಕೋವಿಡ್ – 19 ಕೇಂದ್ರವೆಂದು ಗೊತ್ತುಪಡಿಸಲಾದ ಈ ಶಾಲೆಯಲ್ಲಿ ಗೋಸ್ವಾಮಿ ರಾತ್ರಿ ಕಳೆದನೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂಟಿರಿಯರ್ ಡಿಸೈನರ್ ಅನ್ವಯ್ ನಾಯ್ಕ್ ಮತ್ತು ಅವರ ತಾಯಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಗೋಸ್ವಾಮಿ ಬಂಧಿತನಾಗಿದ್ದಾನೆ.

Join Whatsapp