ಅರ್ನಾಬ್ ಗೋಸ್ವಾಮಿ ಜೊತೆಗಿನ ವಾಟ್ಸಪ್ ಚಾಟ್ ಸೋರಿಕೆ | ಬಾರ್ಕ್ ಮಾಜಿ ಸಿಇಒ ದಾಸ್ ಗುಪ್ತಾ ಆಸ್ಪತ್ರೆಗೆ ದಾಖಲು

Prasthutha|

ಮುಂಬೈ : ಟಿಆರ್ ಪಿ ಹಗರಣದಲ್ಲಿ ಬಂಧನವಾಗಿದ್ದ ಬಾರ್ಕ್ ಮಾಜಿ ಸಿಇಒ ದಾಸ್ ಗುಪ್ತಾ ಮುಂಬೈನ ಜೆಜೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಟಿಆರ್ ಪಿ ಹಗರಣದಲ್ಲಿ ಭಾಗಿಯಾದ ಆರೋಪಿಗಳಾದ ಪಾರ್ಥೋ ದಾಸ್ ಗುಪ್ತಾ ಮತ್ತು ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ನಡುವೆ ನಡೆದಿದೆ ಎನ್ನಲಾದ ವಾಟ್ಸಪ್ ಚಾಟ್ ಸಂದೇಶಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುವ ಬೆನ್ನಲ್ಲೇ, ದಾಸ್ ಗುಪ್ತಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

- Advertisement -

ಟಿಆರ್ ಪಿ ಹಗರಣದ ಪ್ರಮುಖ ಆರೋಪಿ ಬಾರ್ಕ್ ನ ಮಾಜಿ ಸಿಇಒ ಪಾರ್ಥೊ ದಾಸ್ ಗುಪ್ತಾ ಕಳೆದ ರಾತ್ರಿ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯಕ್ಕೆ ಇವರು ತುರ್ತು ನಿಗಾ ಘಟಕದಲ್ಲಿ ಕೃತಕ ಉಸಿರಾಟದ ಬೆಂಬಲದಲ್ಲಿದ್ದಾರೆ ಎಂದು ಎಎನ್ ಐ ಟ್ವೀಟ್ ಮಾಡಿದೆ.

ಟಿಆರ್ ಪಿ ಹಗರಣಕ್ಕೆ ಸಂಬಂಧಿಸಿ ಪೊಲೀಸರು ದಾಸ್ ಗುಪ್ತಾ ಅವರನ್ನು ವಿಚಾರಣೆ ನಡೆಸುತ್ತಿದ್ದರು. ಮುಂಬೈ ಪೊಲೀಸರು ಶುಕ್ರವಾರ ಅರ್ನಾಬ್ ಗೋಸ್ವಾಮಿ ಮತ್ತು ದಾಸ್ ಗುಪ್ತಾ ಅವರ ನಡುವಿನ ವಾಟ್ಸಪ್ ಚಾಟ್ ಸಂದೇಶಗಳ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಮಾಹಿತಿಯಲ್ಲಿ ದೇಶವೇ ಬೆಚ್ಚಿಬೀಳುವಂತಹ ಹಲವಾರು ಸ್ಫೋಟಕ ಮಾಹಿತಿಗಳು ಹೊರಬೀಳುತ್ತಿವೆ. ಗೋಸ್ವಾಮಿ ಮತ್ತು ದಾಸ್ ಗುಪ್ತಾ ನಡುವಿನ ವಾಟ್ಸಪ್ ಚಾಟ್ ಮಾಹಿತಿಗಳ 500 ಪುಟಗಳನ್ನು ಪೊಲೀಸರು ಬಹಿರಂಗಗೊಳಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳಾಗುತ್ತಿವೆ.

Join Whatsapp