ರಾವಣ ದಹನದ ವೇಳೆ ನೆರೆದಿದ್ದವರ ಮೇಲೆ ಬಿದ್ದ ಪ್ರತಿಕೃತಿ; ಏಳು ಮಂದಿಗೆ ಗಾಯ

Prasthutha|

ಚಂಢೀಗಡ: ದಸರಾ ಕಾರ್ಯಕ್ರಮವೊಂದರಲ್ಲಿ ರಾವಣ ದಹನದ ವೇಳೆ ರಾವಣನ ಪ್ರತಿಕೃತಿ ಪ್ರೇಕ್ಷಕರ ಮೇಲೆ ಬಿದ್ದ ಪರಿಣಾಮ ಏಳು ಮಂದಿ ಗಾಯಗೊಂಡಿರುವ ಘಟನೆ ಹರಿಯಾಣದ ಯಮುನಾನಗರದಲ್ಲಿ ನಡೆದಿದೆ.

- Advertisement -

ಯಮುನಾ ನಗರದ ದಸರಾ ಮೈದಾನದಲ್ಲಿ ರಾವಣ ದಹನದ ವೇಳೆ ರಾವಣನ ಪ್ರತಿಕೃತಿಯು ಅಲ್ಲಿ ಕುಳಿತಿದ್ದ ಜನರ ಮೇಲೆ ಬಿದ್ದಿದೆ. ಇದೇ ವೇಳೆ ಮೂರ್ತಿ ಕುಸಿದು ಬಿದ್ದಿದ್ದರಿಂದ ಸ್ಥಳದಲ್ಲಿ ಕೆಲಕಾಲ ನೂಕುನುಗ್ಗಲು ಉಂಟಾಯಿತು ಎಂದು ತಿಳಿದುಬಂದಿದೆ. 

ಅಪಘಾತದಲ್ಲಿ ಮೂವರ ತಲೆಗೆ ಗಾಯವಾಗಿದ್ದು, ಇಬ್ಬರ ಬಟ್ಟೆ ಸುಟ್ಟು ಕರಕಲಾಗಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

- Advertisement -

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

Join Whatsapp