ನೇಪಾಳ ಮತ್ತು ಶ್ರೀಲಂಕಾದಲ್ಲೂ ಸರಕಾರ ರಚಿಸಲು ಅಮಿತ್ ಶಾ ಯೋಜನೆ : ತ್ರಿಪುರ ಸಿಎಂ

Prasthutha|

- Advertisement -

ನೆರೆಯ ರಾಷ್ಟ್ರಗಳಾದ ನೇಪಾಳ ಮತ್ತು ಶ್ರೀಲಂಕಾಕ್ಕೆ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುವ ಯೋಜನೆಯನ್ನು ಬಿಜೆಪಿ ಹೊಂದಿದೆ ಎಂದು ತ್ರಿಪುರ ಮುಖ್ಯಮಂತ್ರಿ ಬಿಪ್ಲವ್ ಕುಮಾರ್ ದೇವ್ ಹೇಳಿದ್ದಾರೆ. ಅವರು ಅಗರ್ತಾದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡುತ್ತಿದ್ದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿ ಅಧ್ಯಕ್ಷರಾಗಿದ್ದಾಗ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭ ಈ ವಿಷಯ ತಿಳಿಸಿದ್ದಾರೆಂದು ತ್ರಿಪುರ ಮುಖ್ಯಮಂತ್ರಿ ಹೇಳಿದ್ದಾರೆ.

- Advertisement -

“ತಾವು ನಮ್ಮ ಪಕ್ಷದ ಅಧ್ಯಕ್ಷರಾಗಿದ್ದಾಗಿನಿಂದ ಅನೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಅಮಿತ್ ಶಾ ಅವರ ಬಳಿ ನಾವು ಹೇಳಿದೆವು. ಇದರ ಹೊರತಾಗಿ ನೇಪಾಳ ಮತ್ತು ಶ್ರೀಲಂಕಾ ರಾಷ್ಟ್ರಗಳಲ್ಲೂ ಅಧಿಕಾರ ಪಡೆಯುವ ಯೋಜನೆಯಿದೆ, ನಾವು ಪಕ್ಷವನ್ನು ನೇಪಾಳ ಮತ್ತು ಶ್ರೀಲಂಕಾಕ್ಕೆ ವಿಸ್ತರಿಸಬೇಕಾಗಿದೆ ನಾವು ಅಲ್ಲಿಯೂ ಗೆಲ್ಲಬೇಕು ಎಂದು ಅಮಿತ್ ಶಾ ಹೇಳಿದ್ದಾರೆ ಎಂದು ಬಿಪ್ಲವ್ ದೇವ್ ಹೇಳಿದ್ದಾರೆ.

Join Whatsapp