ಬಕ್ರೀದ್ ನಮಾಝ್ ಮಾರ್ಗಸೂಚಿಯಲ್ಲಿ ತಿದ್ದುಪಡಿ! ಹೊಸ ಆದೇಶದಲ್ಲೇನಿದೆ?

Prasthutha|

ಬೆಂಗಳೂರು: ಜು.21ರಂದು ಆಚರಿಸಲಾಗುವ ಬಕ್ರೀದ್ ಆಚರಣೆಗೆ ನಿನ್ನೆ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದು, ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧಿಸಿ ಆಯಾ ಮಸೀದಿಗಳಲ್ಲಿ 50 ಜನರನ್ನು ಮೀರದಂತೆ ಕೋವಿಡ್ ನಿಯಂತ್ರಣ ಕ್ರಮಗಳೊಂದಿಗೆ ಪ್ರಾರ್ಥನೆ ಸಲ್ಲಿಸಲು ಮಾರ್ಗಸೂಚಿಯಲ್ಲಿ ಆದೇಶಿಸಲಾಗಿತ್ತು.

- Advertisement -

ಆದರೆ ಇಂದು ಹೊಸ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದ್ದು, ‘ಆಯಾ ಮಸೀದಿಗಳಲ್ಲಿ 50ಜನರು ಮೀರದಂತೆ’ ಬದಲಾಗಿ ‘ಆಯಾ ಮಸೀದಿಗಳ ಸಾಮಾರ್ಥ್ಯಕ್ಕೆ ಅನುಗುಣವಾಗಿ ಶೇಕಡಾ 50ರಷ್ಟು ಜನರು ಮೀರದಂತೆ’ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.


Join Whatsapp