‘ಇಂಡಿಯಾ’ ಮೈತ್ರಿ ಬಗ್ಗೆ ಅಖಿಲೇಶ್ ಅಚ್ಚರಿ ಹೇಳಿಕೆ

Prasthutha|

- Advertisement -

ಲಕ್ನೊ; ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ‘ಇಂಡಿಯಾ’ ಮೈತ್ರಿಕೂಟದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಥಾನಗಳ ಬಗ್ಗೆ ಕಾಂಗ್ರೆಸ್‌ನೊಂದಿಗೆ ಸಮಾಜವಾದಿ ಪಕ್ಷದ ಪರಸ್ಪರ ಉದ್ವಿಗ್ನತೆ ಉತ್ತುಂಗದಲ್ಲಿದೆ. ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಸೀಟು ಹಂಚಿಕೆ ಬಗ್ಗೆ ಕಾಂಗ್ರೆಸ್ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದರು. ನಂತರ ಎರಡೂ ಪಕ್ಷಗಳು ಬೇರೆಯಾದವು.

ಆದರೀಗ ಅಖಿಲೇಶ್ ಅವರ ಹೇಳಿಕೆ ಅಚ್ಚರಿ ಮೂಡಿಸಿದೆ.

- Advertisement -

ಕಾಂಗ್ರೆಸ್ ಜೊತೆಗಿನ ಕಿತ್ತಾಟದ ನಡುವೆಯೇ,
ಎಸ್‌ಪಿ ‘ಇಂಡಿಯಾ’ ಮೈತ್ರಿಯಲ್ಲಿ ಉಳಿದಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ

ಕಾಂಗ್ರೆಸ್ ಜೊತೆಗಿನ ವಿವಾದದಿಂದಾಗಿ ಸಮಾಜವಾದಿ ಪಕ್ಷವು ‘ಇಂಡಿಯಾ’ದಿಂದ ಕೆಳಗಿಳಿಯಬಹುದು ಎಂಬ ಚರ್ಚೆಗಳು ಪ್ರಾರಂಭವಾಗಿದ್ದವು. ಆದರೆ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಎಸ್‌ಪಿ ಮುಖ್ಯಸ್ಥರು, ತಾವು ಇನ್ನೂ ‘ಇಂಡಿಯಾ’ದ ಭಾಗವಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

Join Whatsapp